ಮೋದಿ ಅಲೆ ಇಲ್ಲ ಎನ್ನೋದಕ್ಕೆ ಅವರು ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿರೋದು ಸಾಕ್ಷಿ: ಸಿಎಂ

ಶುಕ್ರವಾರ, 28 ಮಾರ್ಚ್ 2014 (17:56 IST)
PR
PR
ಬೆಂಗಳೂರು: ಬಿಜೆಪಿಯ ಮುಖಂಡರು ಯಾರು ಏನೇ ಟೀಕಿಸಿದರೂ ಮೋದಿ ವಿರುದ್ಧದ 'ನರಹಂತಕ' ಆರೋಪವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ ಇನ್ನೂ ನಿಲ್ಲಿಸಿಲ್ಲ. ಮೋದಿ ನರಹಂತಕ ಎಂದು ಸಿದ್ದರಾಮಯ್ಯ ಮತ್ತೊಮ್ಮೆ ಗುಡುಗಿದರು. ಮೋದಿ ಅಲೆ ಇಲ್ಲ ಅನ್ನೋದಕ್ಕೆ ಅವರು ಮುಖ್ಯಮಂತ್ರಿ ಹುದ್ದೆ ತ್ಯಜಿಸದಿರೋದೇ ನಿದರ್ಶನ ಎಂದು ಹೇಳಿದರು. ಜೆಡಿಎಸ್ ಅತೃಪ್ತರನ್ನು ಕರೆದು ಟಿಕೆಟ್ ಕೊಡುತ್ತಿದೆ. ಅಪ್ಪ-ಮಕ್ಕಳ ಪಕ್ಷ ಜೆಡಿಎಸ್ ಒಂದು ಕ್ಷೇತ್ರದಲ್ಲಿಯೂ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ರಾಜ್ಯದಲ್ಲಿ ಅಷ್ಟೇ ಅಲ್ಲ ದೇಶದಲ್ಲೇ ಮೋದಿ ಅಲೆ ಇಲ್ಲ, ಮೋದಿ ಅಧೀರರಾಗಿ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಿರೋದು ಮತ್ತು ಮುಖ್ಯಮಂತ್ರಿ ಹುದ್ದೆ ತ್ಯಜಿಸದೇ ಪ್ರಧಾನಿ ಅಭ್ಯರ್ಥಿಯಾಗಿ ಪ್ರಚಾರ ಮಾಡ್ತಿರೋದು ಇದಕ್ಕೆ ನಿದರ್ಶನ ಎಂದು ವಾಗ್ದಾಳಿ ಮಾಡಿದರು.

ವೆಬ್ದುನಿಯಾವನ್ನು ಓದಿ