ಮೋದಿ ಅಲೆ ಕೃತಕ ಸೃಷ್ಟಿ, ಚುನಾವಣೆಯ ನಂತರ ಸತ್ಯ ಗೊತ್ತಾಗುತ್ತೆ: ಎಸ್.ಎಂ.ಕೃಷ್ಣ

ಬುಧವಾರ, 2 ಏಪ್ರಿಲ್ 2014 (11:41 IST)
PR
PR
ಬೆಂಗಳೂರು: ಮೋದಿ ಅಲೆ ಎಂಬುದು ಕೃತಕ ಸೃಷ್ಟಿಯಾಗಿದ್ದು, ಚುನಾವಣೆಯ ನಂತರ ಸತ್ಯ ಏನೆಂಬುದು ಗೊತ್ತಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಹೇಳಿದ್ದಾರೆ. ಸದಾಶಿವನಗರದ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಕೃಷ್ಣ ಮಾತನಾಡಿದ ಬಳಿಕ ಚುನಾವಣೆ ಪ್ರಚಾರ ಕಾರ್ಯಕ್ಕೆ ಇಳಿದಿದ್ದಾರೆ. ನಾವು ಆಡಳಿತ ವಿರೋಧಿ ಅಲೆ ಎದುರಿಸುತ್ತಿದ್ದೇವೆ. ಕರ್ನಾಟಕದಲ್ಲಿ ನರೇಂದ್ರ ಮೋದಿ ಅಲೆ ಇಲ್ಲ. ನಾವು ಚುನಾವಣೆಯಲ್ಲಿ 20ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ ಎಂದು ಕೃಷ್ಣ ಹೇಳಿದರು. ಆದರೆ ನಮ್ಮ ದೇಶದಲ್ಲಿ ಗುಪ್ತ ಮತದಾರರು ಇದ್ದಾರೆ.

ಯಾವ ಅಭಿಪ್ರಾಯವನ್ನೂ ವ್ಯಕ್ತಪಡಿಸದೇ ಮತಗಟ್ಟೆಗೆ ಹೋದಾಗ ತಮ್ಮ ಮತವನ್ನು ಚಲಾಯಿಸುತ್ತಾರೆ. 10 ವರ್ಷಗಳಿಂದ ಆಡಳಿತ ನಡೆಸುತ್ತಿರುವುದರಿಂದ ಆಡಳಿತ ವಿರೋಧಿ ಅಲೆ ಬರುವುದು ಸ್ವಾಭಾವಿಕ. ನಾವು ಆಡಳಿತ ವಿರೋಧಿ ಅಲೆ ಎದುರಿಸುತ್ತಿದ್ದೇವೆ ಎಂಬ ಪ್ರಜ್ಞೆ ನಮಗಿದೆ ಎಂದು ಹೇಳಿದರು. ಹಲವು ಸಮೀಕ್ಷೆಗಳು ಕಾಂಗ್ರೆಸ್ ವಿರುದ್ಧ ಬಂದಿವೆ. ಈ ಸಮೀಕ್ಷೆಗಳು ನಮಗೆ ಹೊಸತಲ್ಲ. ಭ್ರಷ್ಟಾಚಾರ ಆರೋಪ ಬಂದಾಗಲೆಲ್ಲ ಕ್ರಮ ಕೈಗೊಂಡಿದ್ದೇವೆ ಎಂದು ಎಸ್.ಎಂ.ಕೃಷ್ಣ ಹೇಳಿದರು.

ವೆಬ್ದುನಿಯಾವನ್ನು ಓದಿ