ಮೋದಿ ಪ್ರಚಾರದ ಅಬ್ಬರಕ್ಕೆ ಟಾಂಗ್ ಕೊಡಲು ಜೆಡಿಎಸ್ ಯುವಸಮಾವೇಶ

ಬುಧವಾರ, 29 ಜನವರಿ 2014 (19:17 IST)
PR
PR
ಬೆಂಗಳೂರಿನ ಅರಮನೆ ಮೈದಾನದಲ್ಲಿ ಯುವಚೇತನ ಸಮಾವೇಶ ನಡೆಯುತ್ತಿದೆ. ಸಮಾವೇಶದ ಮೂಲಕ ಜೆಡಿಎಸ್ ಶಕ್ತಿಪ್ರದರ್ಶನಕ್ಕೆ ಸಿದ್ದತೆ ನಡೆಯುತ್ತಿದೆ. ಎಚ್.ಡಿ.ದೇವೇಗೌಡ, ಕುಮಾರಸ್ವಾಮಿ ನೇತೃತ್ವದಲ್ಲಿ ಸಮಾವೇಶ ನಡೆದಿದೆ. ವಿವಿಧ ಜಿಲ್ಲೆಗಳಿಂದ ಕಾರ್ಯಕರ್ತರು ಬೈಕ್‌ ಮೆರವಣಿಗೆ ಮೂಲಕ ಆಗಮಿಸಿದ್ದಾರೆ. ಮೈಸೂರಿನಿಂದ ಬೈಕ್‌ನಿಂದ ಬಂದ ಕುಮಾರಸ್ವಾಮಿ ಸ್ವಲ್ಪದೂರ ತೆರಳಿ ನಂತರ ಕಾರಿನಲ್ಲಿ ಸಮಾವೇಶಕ್ಕೆ ಹಾಜರಾದರೆಂದು ಹೇಳಲಾಗಿದೆ. ಜೆಡಿಎಸ್ ಯುವಘಟಕದ ಅಧ್ಯಕ್ಷ ಮಧುಬಂಗಾರಪ್ಪ ಕೂಡ ಆಗಮಿಸಿದ್ದಾರೆ.

ಮೋದಿಯ ಅಬ್ಬರದ ಪ್ರಚಾರಕ್ಕೆ ಟಾಂಗ್ ಕೊಡಲು ಜೆಡಿಎಸ್ ಸಮಾವೇಶ ನಡೆಸಲಾಗುತ್ತಿದೆಯೆಂದು ವಿಶ್ಲೇಷಿಸಲಾಗಿದೆ. ಯುವಕಾರ್ಯಕರ್ತರಲ್ಲಿ ಒಂದು ಹೊಸ ಚೈತನ್ಯ ತುಂಬುವುದು ಈ ಸಮಾವೇಶದ ಉದ್ದೇಶವಾಗಿದೆ.

ವೆಬ್ದುನಿಯಾವನ್ನು ಓದಿ