ರಾಜ್ಯದ ಸಮಗ್ರ ಅಭಿವೃದ್ಧಿಯ ಹರಿಕಾರರಾದ ಯಡಿಯೂರಪ್ಪ ಪಕ್ಷದ ಕ್ರಿಯಾಶೀಲ ಮತ್ತು ಡೈನಾಮಿಕ್ ನಾಯಕರಾಗಿದ್ದವರು. ಪಕ್ಷವನ್ನು ತಮ್ಮ ಅವಿರತ ಹೋರಾಟದ ಮೂಲಕ ಕಟ್ಟಿದ ಮಹಾನ್ ಚಾಣಾಕ್ಷ್ಯ ರಾಜಕಾರಣಿ ಬಿಜೆಪಿಯ ಮಂಡ್ಯ ಜಿಲ್ಲಾ ಉಸ್ತುವಾರಿಯಾದ ಶಾಸಕ ಸುರೇಶ್ಗೌಡ ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬಿಜೆಪಿಗೆ ಮರಳಿ ಬಂದರೆ ಪಕ್ಷಕ್ಕೆ ಆನೆ ಬಲ ಬಂದಂತಾಗುತ್ತದೆ ಎಂದು ಹೇಳಿದ್ದಾರೆ.
ಪಟ್ಟಣದ ತಾಲೂಕು ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಯಡಿಯೂರಪ್ಪ ಅವರ ಆಗಮನದಿಂದ ಬಿಜೆಪಿ ಪಕ್ಷ ಸಂಘಟನೆಯ ವೇಗ ಹೆಚ್ಚಾಗುತ್ತದೆ. ಮುಂದಿನ ಐದು ವರ್ಷಗಳಲ್ಲಿ ಪಕ್ಷ ಮತ್ತೆ ಅಧಿಕಾರಕ್ಕೆ ಬರಲು ಸಹಕಾರಿಯಾಗಲಿದೆ ಎಂದರು.