ಯಾವ ಶಾಸಕರೂ ವಿದೇಶ ಪ್ರವಾಸಕ್ಕೆ ಹೋಗಬಾರ್ದು: ಸಿಎಂಗೆ ರಾಹುಲ್ ಖಡಕ್ ಎಚ್ಚರಿಕೆ

ಶುಕ್ರವಾರ, 27 ಡಿಸೆಂಬರ್ 2013 (14:50 IST)
PR
PR
ನವದೆಹಲಿ: ಯಾವ ಶಾಸಕರೂ ವಿದೇಶಪ್ರವಾಸಕ್ಕೆ ಹೋಗಬಾರ್ದು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ರಾಹುಲ್ ಗಾಂಧಿ ಖಡಕ್ ಎಚ್ಚರಿಕೆ ನೀಡಿದ್ದಾರೆ. ಶಾಸಕರ ವಿದೇಶ ಪ್ರವಾಸವನ್ನು ರದ್ದುಪಡಿಸುವಂತೆ ರಾಹುಲ್ ಸೂಚನೆ ನೀಡಿದರು. ವಿದೇಶ ಪ್ರವಾಸಕ್ಕೆ ತೆರಳಲು ಕರ್ನಾಟಕದ ಕಾಂಗ್ರೆಸ್ ಶಾಸಕರ ಇನ್ನೊಂದು ದಂಡು ಉತ್ಸಾಹದಿಂದ ಸಜ್ಜಾಗುತ್ತಿರುವ ನಡುವೆ ರಾಹುಲ್ ಸೂಚನೆ ಹೊರಬಿದ್ದಿದೆ. ನಿನ್ನೆ ಮಾಧ್ಯಮದವರ ಜತೆ ಮಾತನಾಡುತ್ತಿದ್ದ ಸಿದ್ದರಾಮಯ್ಯ ವಿದೇಶ ಪ್ರವಾಸಕ್ಕೆ ಹೋಗುವುದು ಶಾಸಕಾಂಗ ಸಮಿತಿಯ ತೀರ್ಮಾನ. ಇದು ಹೊಸದೇನೂ ಅಲ್ಲ, ಪ್ರತಿವರ್ಷ ಹೋಗ್ತಾರೆ ಎಂದು ಹೇಳಿದ್ದರು.

ಮುಂಬರುವ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಭರ್ಜರಿ ತಯಾರಿ ನಡೆಸಿದ್ದು, ಲೋಕಸಭೆ ಚುನಾವಣೆಗೆ ಸಿದ್ಥತೆ ಮಾಡಿಕೊಳ್ಳುವುದಕ್ಕೆ ರಾಜ್ಯದ ಮುಖ್ಯಮಂತ್ರಿಗಳ ಸಭೆಯನ್ನು ದೆಹಲಿಯಲ್ಲಿ ಕರೆಯಲಾಗಿತ್ತು. ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಲೋಕಪಾಲ್ ಬಿಲ್, ಬೆಲೆ ಏರಿಕೆ ಕುರಿತು ಮಾತನಾಡಲು ಸಭೆ ಕರೆದಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರನ್ನು ರಾಹುಲ್ ಭೇಟಿ ಮಾಡಿ ಶಾಸಕರ ವಿದೇಶ ಪ್ರವಾಸದ ಬಗ್ಗೆ ಮಾಧ್ಯಮಗಳಲ್ಲಿ ಟೀಕೆ ಕೇಳಿಬಂದಿರುವುದನ್ನು ಉಲ್ಲೇಖಿಸಿ, ಯಾವ ಶಾಸಕರೂ ವಿದೇಶ ಪ್ರವಾಸಕ್ಕೆ ಹೋಗಬಾರದೆಂದು ಖಡಕ್ ಎಚ್ಚರಿಕೆಯನ್ನು ನೀಡಿದರು.

ವೆಬ್ದುನಿಯಾವನ್ನು ಓದಿ