ಯುಗಾದಿಗಾಗಿ ನಗೆ ಉತ್ಸವ

ಭಾನುವಾರ, 6 ಏಪ್ರಿಲ್ 2008 (18:17 IST)
ಯುಗಾದಿ ಹಬ್ಬದ ಅಂಗವಾಗಿ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಫೌಂಡೇಶನ್ ವತಿಯಿಂದ ಯುಗಾದಿ ನಗೆ ಉತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಮಲ್ಲೇಶ್ವರಂ ಆಟದ ಮೈದಾನದಲ್ಲಿ ಸೋಮವಾರ ಸಂಜೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಹಲವಾರು ಹಾಸ್ಯ ಸಾಹಿತಿಗಳು ಪಾಲ್ಗೊಂಡು ಜನರಿಗೆ ಮನರಂಜನೆ ನೀಡಲಿದೆ. ಕಳೆದ ಹಲವು ವರ್ಷಗಳಿಂದ ಹಲವಾರು ಕಾರ್ಯಕ್ರಮಗಳ ಮೂಲಕ ಗಮನ ಸೆಳೆದಿದ್ದ, ಅಶ್ವತ್ಥನಾರಾಯಣ ಫೌಂಡೇಶನ್ ಈ ಬಾರಿ ಹಾಸ್ಯ ಉತ್ಸವವನ್ನು ಆಯೋಜಿಸಲು ತೀರ್ಮಾನಿಸಿದೆ.

ಯುಗಾದಿಯಂದು ನಾಗರೀಕರು ಬೇವು-ಬೆಲ್ಲ ಸೇವಿಸಿ ನಗೆ ಉತ್ಸವದಲ್ಲಿ ಪಾಲ್ಗೊಂಡು ವರ್ಷವಿಡೀ ಉಲ್ಲಾಸದಿಂದ ಇರಲಿ ಎಂಬ ಉದ್ದೇಶದೊಂದಿಗೆ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂಬುದು ಆಯೋಜಕರ ನುಡಿ.

ನಾಲ್ಕು ಗಂಟೆಗಳ ಕಾಲ ನಡೆಯುವ ನಗೆ ಉತ್ಸವದಲ್ಲಿ ಮಿಮಿಕ್ರಿ ದಯಾನಂದ್ ಮಾಸ್ಟರ್ ಹಿರಣಯ್ಯ, ಗಂಗಾವತಿ ಬೀಚಿ ಅವರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಅಲ್ಲದೆ, ಕಾರ್ಯಕ್ರಮದ ಅತಿಥಿಗಳಾಗಿ ಸಂಸದ ಅನಂತ್‌ಕು0ಮಾರ್, ಬಿಜೆಪಿ ರಾಜ್ಯಾಧ್ಯಕ್ಷ ಡಿ.ವಿ. ಸದಾನಂದಗೌಡ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.

ವೆಬ್ದುನಿಯಾವನ್ನು ಓದಿ