ರಮ್ಯಾಳನ್ನು ಮದುವೆಯಾಗಿರುವುದಾಗಿ ಹೇಳಿದ್ದ ವೆಂಕಟ್ ಬಂಧನ

ಶುಕ್ರವಾರ, 21 ಫೆಬ್ರವರಿ 2014 (13:21 IST)
PR
PR
ಬೆಂಗಳೂರು: ಹುಚ್ಚ ವೆಂಕಟ್ ಎಂಬ ಸಿನಿಮಾ ನಿರ್ಮಿಸಲು ಹೋಗಿ ಸ್ವತಃ ಮಾನಸಿಕ ಸ್ಥಿಮಿತ ಕಳೆದುಕೊಂಡಿರುವ ವೆಂಕಟ್ ವಿರುದ್ಧ ಸಂಸದೆ ರಮ್ಯಾ ದೂರು ದಾಖಲಿಸಿದ್ದಾರೆ. ರಮ್ಯಾಳನ್ನು ತಾನು ಮದುವೆಯಾಗಿರುವುದಾಗಿ ವೆಂಕಟ್ ಮಾಧ್ಯಮಗಳಿಗೆ ಹೇಳಿದ್ದ. ಈ ಹಿನ್ನೆಲೆಯಲ್ಲಿ ರಮ್ಯಾ ದೂರು ನೀಡಿದ ನಂತರ ಪೊಲೀಸರು ವೆಂಕಟ್‌ನನ್ನು ಬಂಧಿಸಿದ್ದಾರೆ. ಹುಚ್ಚ ವೆಂಕಟ್ ಎಂಬ ಚಿತ್ರವನ್ನು ಕೂಡ ಅವನು ನಿರ್ಮಿಸುತ್ತಿದ್ದ. ಕಬ್ಬನ್ ಪಾರ್ಕ್ ಠಾಣೆಯಲ್ಲಿ ರಮ್ಯಾ ದೂರು ದಾಖಲಿಸಿದ ಬಳಿಕ ವೆಂಕಟ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ರಮ್ಯಾ ಜತೆ ತನಗೆ ಮದುವೆಯಾಗಿದೆ ಎಂದು ವೆಂಕಟ್ ಹೇಳಿಕೆ ನೀಡಿದ್ದ. ನಾನು ಅವರನ್ನು ಬನಶಂಕರಿ ದೇವಸ್ಥಾನದಲ್ಲಿ ಮದುವೆಯಾಗಿದ್ದೀನಿ, ತಾಳಿ ಕಟ್ಟೀದ್ದೀನಿ ಎಂದು ಹೇಳಿದ್ದ.

ವೆಬ್ದುನಿಯಾವನ್ನು ಓದಿ