ರಾಜ್ಯಪಾಲರ ಹುದ್ದೆಯಿಂದ ನಿರ್ಗಮಿಸುವ ಚಿಂತನೆ: ಭಾರದ್ವಾಜ್

ಶುಕ್ರವಾರ, 27 ಡಿಸೆಂಬರ್ 2013 (17:22 IST)
PR
PR
ಮೈಸೂರು: ನನ್ನ ಸ್ಥಾನವನ್ನು ಉಳಿಸಿಕೊಳ್ಳಲು ಹೋರಾಟ ಮಾಡುವ ಪರಿಸ್ಥಿತಿಯಿದೆ. ನನ್ನ ಮಾತನ್ನು ಯಾರೂ ಕೇಳ್ತಿಲ್ಲ. ಶಾಸಕರು ಕ್ಷೇತ್ರದ ಕೆಲಸವನ್ನು ಸರಿಯಾಗಿ ಮಾಡ್ತಾಇಲ್ಲ. ಶಾಸಕರು ತಮ್ಮ ಕಾರ್ಯವೈಖರಿ ಬಗ್ಗೆ ತಾವೇ ಆತ್ಮಾವಲೋಕನ ಮಾಡಿಕೊಳ್ಳಬೇಕು. ಶಾಸಕರು ನನ್ನ ಮಾತನ್ನು ಕೇಳುತ್ತಿಲ್ಲವಾದ್ದರಿಂದ ನಾನು ರಾಜ್ಯಪಾಲರ ಹುದ್ದೆಯಿಂದ ನಿರ್ಗಮಿಸುವ ಬಗ್ಗೆ ಚಿಂತನೆ ಮಾಡಿದ್ದೇನೆ ಎಂದು ಹೇಳಿದರು. ಶಾಸಕರ ವಿದೇಶ ಪ್ರವಾಸದ ಬಗ್ಗೆ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಪ್ರತಿಕ್ರಿಯೆ ಕೇಳಿದಾಗ ಅವರು ಮೇಲಿನಂತೆ ತಿಳಿಸಿದರು.

ಶಾಸಕರ ವಿದೇಶಪ್ರವಾಸದ ವಿಚಾರವಾಗಿ ರಾಜ್ಯಪಾಲರು ಬೇಸರಗೊಂಡಂತೆ ಕಂಡುಬಂದರು. ಶಾಸಕರ ಬಗ್ಗೆ ನಾನು ಏನು ಹೇಳಲು ಸಾಧ್ಯವಿಲ್ಲ. ಶಾಸಕರಿಗೆ ಇದು ಅರ್ಥವಾಗದಿದ್ದರೆ ಕಷ್ಟ ಎಂದು ರಾಜ್ಯಪಾಲರು ಹೇಳಿದರು. ಶಾಸಕರು ಅಭಿವೃದ್ಧಿ ಕಾರ್ಯಗಳ ಕಡೆ ಹೆಚ್ಚು ಗಮನಹರಿಸುತ್ತಿಲ್ಲ ಎಂದು ರಾಜ್ಯಪಾಲರು ಹೇಳಿದರು.

ವೆಬ್ದುನಿಯಾವನ್ನು ಓದಿ