ರಾಜ್ಯ ಕಂಡ ಕವಿಗಳಲ್ಲಿ ಜಿಎಸ್‌ಎಸ್ ಶ್ರೇಷ್ಠ ಕವಿ: ಸಿಎಂ ಸಿದ್ದರಾಮಯ್ಯ

ಸೋಮವಾರ, 23 ಡಿಸೆಂಬರ್ 2013 (18:15 IST)
PR
PR
ಬೆಂಗಳೂರು: ಜಿಎಸ್‌ಎಸ್ ಅಗಲಿಕೆಯಿಂದ ತುಂಬಾ ದುಃಖವಾಗಿದೆ. ಕುವೆಂಪು ಅವರ ಒಡನಾಡಿ, ಪಟ್ಟ ಶಿಷ್ಯರಾಗಿದ್ದರು. ರಾಜ್ಯ ಕಂಡ ಕವಿಗಳಲ್ಲಿ ಜಿ.ಎಸ್. ಶಿವರುದ್ರಪ್ಪ ಶ್ರೇಷ್ಠ ಕವಿ. ಕೇಂದ್ರ ಸಾಹಿತ್ಯ ಅಕಾಡೆಮಿ, ನಾಡೋಜ, ಪಂಪ, ಕನ್ನಡ ರಾಜ್ಯೋತ್ಸವ, ಪ್ರಶಸ್ತಿ ಪಡೆದಿದ್ದಾರೆ. ರಾಷ್ಟ್ರಕವಿ ಗೌರವಕ್ಕೆ ಪಾತ್ರರಾದ ಮೂರನೇ ಕವಿ ಶಿವರುದ್ರಪ್ಪ. ಅವರು ಕಂದಾಚಾರ ಮೌಢ್ಯಗಳ ವಿರುದ್ಧ ಹೋರಾಟ ಮಾಡಿದರು. ಜಿಎಸ್ಎಸ್ ಆತ್ಮಕ್ಕೆ ಚಿರಶಾಂತಿ ಕೋರುತ್ತೇನೆ, ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಸಿದ್ದರಾಮಯ್ಯ ಹೇಳಿದರು.

ಕುಟುಂಬ ಸದಸ್ಯರ ಒತ್ತಾಸೆಯಂತೆ ಅಂತ್ಯಕ್ರಿಯೆ ನಡೆಸಲಾಗುತ್ತದೆ. ಸಂಬಂಧಿಕರು ವಿದೇಶದಿಂದ ಬರಬೇಕಿರುವುದರಿಂದ ಅಂತ್ಯಕ್ರಿಯೆಯನ್ನು ಗುರುವಾರ ನಡೆಸಲು ನಿರ್ಧರಿಸಲಾಗಿದೆ. ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಸಲಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು. ರಾಜ್ಯಾದ್ಯಂತ ಇಂದು, ನಾಳೆ ಶೋಕಾಚರಣೆ ಮಾಡಲಾಗುತ್ತದೆ ಎಂದು ಶಿವರುದ್ರಪ್ಪ ಹೇಳಿದರು.

ವೆಬ್ದುನಿಯಾವನ್ನು ಓದಿ