ರಾಜ್ಯ ಬಜೆಟ್ ಫೆಬ್ರವರಿ 14ರಂದು ಮಂಡನೆ

ಬುಧವಾರ, 29 ಜನವರಿ 2014 (11:23 IST)
PR
PR
ಫೆಬ್ರವರಿ 14ರಂದು ರಾಜ್ಯ ಬಜೆಟ್ ಮಂಡನೆಯಾಗಲಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಶಾಸಕಾಂಗ ಪಕ್ಷದ ಸಭೆಯ ಬಳಿಕ ಸಿಎಂ ಈ ವಿಷಯ ತಿಳಿಸಿದ್ದಾರೆ. ಸೋನಿಯಾ ಗಾಂಧಿ ಕಾರ್ಯಕ್ರಮಕ್ಕೆ ಎಲ್ಲರೂ ಹಾಜರಾಗಬೇಕು ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿಎಂ ತಿಳಿಸಿದ್ದಾರೆಂದು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ರಾಜ್ಯಪ್ರವಾಸದಲ್ಲಿ ಯಾವ ಯಾವ ರೂಪುರೇಷೆ ರೂಪಿಸಬೇಕೆಂದು ಚರ್ಚಿಸಲಾಯಿತು. ಶಾಸಕಾಂಗ ಸಭೆಯಲ್ಲಿ ಪಕ್ಷ ಸಂಘಟನೆ ಕುರಿತು ಚರ್ಚಿಸಿದ್ದೇವೆ ಎಂದು ಪರಮೇಶ್ವರ್ ಹೇಳಿದರು.

ಸದನದಲ್ಲಿ ಶಾಸಕರು, ಸಚಿವರ ಗೈರುಹಾಜರಿನ ಬಗ್ಗೆ ಕೂಡ ಚರ್ಚೆಯಾಯಿತೆಂದು ಪರಮೇಶ್ವರ್ ಹೇಳಿದರು. ಸದನದಲ್ಲಿ ಸಚಿವರ ಗೈರಿನ ಬಗ್ಗೆ ಎಸ್.ಆರ್. ಪಾಟೀಲ್ ಅಸಮಾಧಾನ ತೋಡಿಕೊಂಡಿದ್ದರಿಂದ ಎಲ್ಲ ಸಚಿವರು ಕಲಾಪದಲ್ಲಿ ತಪ್ಪದೇ ಹಾಜರಾಗಬೇಕೆಂದು ಸಿಎಂ ಸೂಚನೆ ನೀಡಿದ್ದಾರೆಂದು ಹೇಳಿದರು.

ವೆಬ್ದುನಿಯಾವನ್ನು ಓದಿ