ಬೆಂಗಳೂರು: ಭ್ರಷ್ಟಾಚಾರ ತಡೆ ಕಾಯ್ದೆಯಡಿ ಆರೋಪ ಸಾಬೀತಾಗಿಲ್ಲ. ಹಂಚಿಕೆ ನಿಯಮಾವಳಿಯಲ್ಲಿ ಉಲ್ಲಂಘನೆಯಾಗಿದೆ ಎಂದು ಸಚಿವ ರೋಷನ್ ಬೇಗ್ ವಿರುದ್ದ ಭೂ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಕೋರ್ಟ್ಗೆ ಪೊಲೀಸರು ಸಿ ರಿಪೋರ್ಟ್ ಸಲ್ಲಿಸಿದ್ದಾರೆ.ರೋಷನ್ ಬೇಗ್ ಅವರಿಗೆ ಒಂದು ಎಕರೆ ಭೂಮಿಯನ್ನು ಸಣ್ಣ ಉದ್ದಿಮೆ ಸ್ಥಾಪನೆಗೆ ಅಲಾಟ್ ಮಾಡಲಾಗಿತ್ತು. ಆದರೆ ಬೇಗ್ ಆ ಜಾಗದಲ್ಲಿ ಅಪಾರ್ಟ್ಮೆಂಟ್ ಕಟ್ಟಿದ್ದರು. ಇಲ್ಲಿ ನಿಯಮಾವಳಿ ಉಲ್ಲಂಘನೆಯಾಗಿರುವುದು ನಿಜ.
ಆದರೆ ಕಿಯೋನಿಕ್ಸ್ ಮಾಡಿರುವ ಹಂಚಿಕಯ ಉಲ್ಲಂಘನೆಯಾಗುತ್ತದೆ. ಆದ್ದರಿಂದ ಕಿಯೋನಿಕ್ಸ್ ಮಾತ್ರ ಕ್ರಮ ಕೈಗೊಳ್ಳಬಹುದು ಎಂದು ಲೋಕಾಯುಕ್ತ ಪೊಲೀಸರು ತಿಳಿಸಿ, ಸಿ ರಿಪೋರ್ಟ್ ಸಲ್ಲಿಸಿದ್ದಾರೆ. ಲೋಕಾಯುಕ್ತ ಕೋರ್ಟ್ 25 ರಂದು ವಿಚಾರಣೆ ನಡೆಸಲಿದೆ.