ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಮೇಲೆ ಅತ್ಯಾಚಾರ'

ಭಾನುವಾರ, 15 ಡಿಸೆಂಬರ್ 2013 (17:20 IST)
PR
PR
ಬೆಂಗಳೂರು: ಸಲಿಂಗ ಕಾಮ ಅಪರಾಧ ಎಂಬ ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧ ನಾನಾ ಕಡೆ ಪ್ರತಿಭಟನೆಗಳು ನಡೆಯುತ್ತಿವೆ. ಅದೇ ರೀತಿ ಬೆಂಗಳೂರಿನ ಟೌನ್‌ಹಾಲ್ ಬಳಿ ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧ ಪ್ರತಿಭಟನೆಗೆ ಖ್ಯಾತ ಸಾಹಿತಿ ಗಿರೀಶ್ ಕಾರ್ನಾಡ್ ಸಾಥ್ ನೀಡಿದರು. ಕಪ್ಪುಪಟ್ಟಿ ಧರಿಸಿ ಗಿರೀಶ್ ಕಾರ್ನಾಡ್ ಪ್ರತಿಭಟನೆ ನಡೆಸಿದರು. ವೈಯಕ್ತಿಕ ವಿಷಯಗಳ ಬಗ್ಗೆ ಸುಪ್ರೀಂ ತಲೆಹಾಕಬಾರದು. ಪ್ರತಿಯೊಬ್ಬರಿಗೂ ಅವರದ್ದೇ ಆದ ಹಕ್ಕಿರುತ್ತದೆ ಎಂದು ಕಾರ್ನಾಡ್ ಹೇಳಿದರು. ಕೈಗೆ ಕೋಳಗಳನ್ನು ಕಟ್ಟಿಕೊಂಡು ದೈಹಿಕ ಅಲ್ಪಸಂಖ್ಯಾತರು ಸೇರಿದಂತೆ ವಿದೇಶಿಯರು ಕೂಡ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಕಳೆದ 11ನೇ ತಾರೀಖಿನಿಂದ ಸುಪ್ರೀಂಕೋರ್ಟ್ ತೀರ್ಪಿನಿಂದ ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಮೇಲೆ ಅತ್ಯಾಚಾರ ಮಾಡಿದೆ. ಆದ್ದರಿಂದ ನಮ್ಮ ಪ್ರತಿಭಟನೆ ನಿರಂತರವಾಗಿ ನಡೆಯುತ್ತದೆ ಎಂದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸಲಿಂಗ ಕಾಮಿಯೊಬ್ಬರು ಹೇಳಿದರು.

ವೆಬ್ದುನಿಯಾವನ್ನು ಓದಿ