ಲೋಕಸಭೆಗೆ ಬೆಂಗಳೂರು ಉತ್ತರ ಕ್ಷೇತ್ರದಿಂದ ಸದಾನಂದ ಗೌಡ ಕಣಕ್ಕೆ

ಸೋಮವಾರ, 3 ಮಾರ್ಚ್ 2014 (13:28 IST)
PR
PR
ಬೆಂಗಳೂರು: ಬೆಂಗಳೂರು ಉತ್ತರ ಕ್ಷೇತ್ರದಿಂದ ಡಿ.ವಿ. ಸದಾನಂದಗೌಡ ಅವರು ಬಿಜೆಪಿ ಪರವಾಗಿ ಕಣಕ್ಕೆ ಇಳಿಯಲಿದ್ದಾರೆ. ಬೆಂಗಳೂರು ಉತ್ತರ ಕ್ಷೇತ್ರ ಯಾರ ಪಾಲಾಗುತ್ತದೆ ಎಂಬ ಕುತೂಹಲ ಕೆರಳಿತ್ತು. ಬಿಜೆಪಿಯ ಪಾಲಿಗೆ 28 ಕ್ಷೇತ್ರಗಳ ಪೈಕಿ ಅತ್ಯಂತ ಕಗ್ಗಂಟಾಗಿತ್ತು. ಸದಾನಂದ ಗೌಡರು ರಾಷ್ಟ್ರೀಯ ಮುಖಂಡರನ್ನು ಸಂಪರ್ಕಿಸಿ, ಸಂಘ ಪರಿವಾರದ ಮುಖಂಡರನ್ನು ಭೇಟಿಯಾಗಿದ್ದರು.

ಕಳೆದ ಬಾರಿ ಅಶೋಕ್ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಅಶೋಕ್ ಬೆಂಗಳೂರು ಉತ್ತರದಲ್ಲಿ ಕಣಕ್ಕಿಳಿಯಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಸದಾನಂದ ಗೌಡರು ಪಕ್ಷದ ಶಿಸ್ತಿನ ಸಿಪಾಯಿ ಎಂದು ಪರಿಗಣಿಸಲಾಗಿದ್ದು,ಅವರ ಹೆಸರನ್ನು ಬೆಂಗಳೂರು ಉತ್ತರಕ್ಕೆ ಅಂತಿಮಗೊಳಿಸಲಾಗಿದೆ.

ವೆಬ್ದುನಿಯಾವನ್ನು ಓದಿ