ಲೋಕಾಯುಕ್ತ ದಾಳಿಯಲ್ಲಿ ಬಲೆಗೆ ಬಿದ್ದ ಭಾರೀ ಮಿಕಗಳು

ಶುಕ್ರವಾರ, 20 ಡಿಸೆಂಬರ್ 2013 (19:42 IST)
PR
PR
ಬೆಂಗಳೂರು: ಲೋಕಾಯುಕ್ತ ಅಧಿಕಾರಿಗಳು ರಾಜ್ಯದ ನಾನಾ ಕಡೆಗಳಲ್ಲಿ ದಾಳಿ ನಡೆಸಿ ಆದಾಯ ಮೀರಿ ಅಕ್ರಮ ಆಸ್ತಿ ಗಳಿಸಿದ ಮಿಕಗಳನ್ನು ಬಲೆಗೆ ಕೆಡವಿದ್ದಾರೆ. ಬೆಂಗಳೂರು, ಮಂಡ್ಯ, ಚಿತ್ರದುರ್ಗ, ಉಡುಪಿ, ಧಾರವಾಡ, ತುಮಕೂರು ಸೇರಿದಂತೆ ರಾಜ್ಯಾದ್ಯಂತ ಏಕಕಾಲದಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದರು.

ಮಂಡ್ಯ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯ ನಂದೀಶ್, ಚಿತ್ರದುರ್ಗದ ನಿರ್ಮಿತಿ ಕೇಂದ್ರದ ಯೋಜನಾಧಿಕಾರಿ ಮೂಡಲಗಿರಿಯಪ್ಪ,, ಉಡುಪಿ ಜಿಲ್ಲೆಯ ಕುಂದಾಪುರದ ಬಂದರು ವಿಭಾಗದ ಎಂಜಿನಿಯರ್ ನಾರಾಯಣ ಕಾರ್ವಿ, ಉತ್ತರ ಕನ್ನಡದ ಸಿದ್ದಾಪುರದ ಬೆಸ್ಕಾಂ ಎಇ ಅಂತೋಣಿ ಕುಂಜನಾಥ್, ಬೆಂಗಳೂರಿನ ಬಿಡಿಎ ಸರ್ವೇಯರ್ ನರೇಂದ್ರನಾಥ್, ಬಿಬಿಎಂಪಿ ಕಂದಾಯ ಮಾಪನಅಧಿಕಾರಿ ಪ್ರಸನ್ನಕುಮಾರ್ ಮುಂತಾದ ಅನೇಕ ಅಧಿಕಾರಿಗಳ ನಿವಾಸಗಳ ಮೇಲೆ ಲೋಕಾಯುಕ್ತ ದಾಳಿ ನಡೆಸಿ ಕೋಟ್ಯಂತರ ರೂ. ಮೌಲ್ಯದ ಅಕ್ರಮ ಆಸ್ತಿಯನ್ನು ಮತ್ತು ನಗದು ಹಣವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ವೆಬ್ದುನಿಯಾವನ್ನು ಓದಿ