ವರದಕ್ಷಿಣೆ ಕಿರುಕುಳ: ಇಬ್ಬರು ಮಕ್ಕಳ ಜತೆ ನೀರುಪಾಲಾದ ಅಕ್ಕತಂಗಿಯರು

ಸೋಮವಾರ, 31 ಮಾರ್ಚ್ 2014 (15:24 IST)
PR
PR
ಕೆ.ಆರ್. ನಗರ: ಕೆ.ಆರ್. ನಗರದ ಚಿಕ್ಕನಾಯಕನಹಳ್ಳಿಯಲ್ಲಿ ಅಕ್ಕತಂಗಿಯರಿಬ್ಬರು ತಮ್ಮ ಇಬ್ಬರು ಗಂಡುಮಕ್ಕಳೊಂದಿಗೆ ಚಾಮರಾಜ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಸಂಭವಿಸಿದೆ. ಸವಿತಾ ಪತಿ ಮತ್ತು ಯಶೋಧಾ ಪತಿ ಇಬ್ಬರೂ ತಮ್ಮ ಪತ್ನಿಗೆ ವರದಕ್ಷಿಣೆ ಕಿರುಕುಳ ಕೊಡುತ್ತಿದ್ದರೆಂದು ತಿಳಿದುಬಂದಿದೆ. ಅವರು ಕೇಳಿದಷ್ಟು ಹಣ ಕೊಡಲು ಸಾಧ್ಯವಾಗದಿದ್ದರಿಂದ ವರದಕ್ಷಿಣೆ ಕಿರುಕುಳವನ್ನು ಸಹಿಸಿಕೊಂಡು ಇಬ್ಬರೂ ಸುಮ್ಮನಿದ್ದರು.

ಆದರೆ ಶುಕ್ರವಾರ ಬೆಳಿಗ್ಗೆ ಇಬ್ಬರೂ ತಮ್ಮ ಪತ್ನಿಯ ವಿರುದ್ಧ ಸಿಟ್ಟಿಗೆದ್ದು ಮನೆಯಿಂದ ಹೊರದಬ್ಬಿದಾಗ ತೀವ್ರ ದುಃಖಿತರಾಗಿ ಚಾಮರಾಜ ನಾಲೆಗೆ ಇಬ್ಬರು ಗಂಡುಮಕ್ಕಳೊಂದಿಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ