ವರದಕ್ಷಿಣೆ ಕಿರುಕುಳ: ದೊಣ್ಣೆಯಿಂದ ಪತ್ನಿಯನ್ನು ಹೊಡೆದು ಕೊಂದ!

ಗುರುವಾರ, 7 ನವೆಂಬರ್ 2013 (14:12 IST)
PR
PR
ಪಾಂಡವಪುರ: ಕುಡಿತದ ದಾಸನಾಗಿದ್ದ ಚೆಲುವರಾಜ್ ಎಂಬಾತ ತನ್ನ ಪತ್ನಿ ಪುಷ್ಪಾಳನ್ನು ದೊಣ್ಣೆಯಿಂದ ಹೊಡೆದು ಕೊಂದ ಘಟನೆ ಪಾಂಡವಪುರದಲ್ಲಿ ವರದಿಯಾಗಿದೆ. ಪತ್ನಿ ಊಟ ಮಾಡುತ್ತಿದ್ದ ಸಂದರ್ಭದಲ್ಲಿ ದೊಣ್ಣೆಯಿಂದ ಹೊಡೆದು ಪತಿ ಹತ್ಯೆ ಮಾಡಿದ್ದಾನೆ. ಐದು ವರ್ಷದ ಹಿಂದೆ ಪಾಂಡವಪುರ ತಾಲೂಕಿನ ಪುಷ್ಪಾಳಿಗೆ ಅವನನ್ನು ಕೊಟ್ಟು ಮದುವೆ ಮಾಡಲಾಗಿತ್ತು. ಚೆಲುವರಾಜ್ ಹೆಂಡತಿಗೆ ಸದಾ ಪೀಡಿಸುತ್ತಿದ್ದು, ಮನೆಗೆ ಬೇಕಾದ ಪೀಠೋಪಕರಣಗಳನ್ನು ತರುವಂತೆ ಒತ್ತಾಯಿಸುತ್ತಿದ್ದ.

ಇದಲ್ಲದೇ ವರದಕ್ಷಿಣೆ ತರುವಂತೆ ಪತ್ನಿಗೆ ಪೀಡಿಸುತ್ತಿದ್ದ. ಪತ್ನಿ ಮುದ್ದೆ ಕಟ್ಟುತ್ತಿದ್ದಾಗ ದೊಣ್ಣೆಯಿಂದ ಪತ್ನಿಗೆ ಹೊಡೆದಾಗ ಅವಳ ಕೈ, ಕಾಲುಗಳಿಗೆ ಗಾಯವಾಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ.

ವೆಬ್ದುನಿಯಾವನ್ನು ಓದಿ