ವರ್ತೂರು ವರ್ತನೆಯಲ್ಲಿ ಬದಲಾವಣೆ...

ಗುರುವಾರ, 27 ನವೆಂಬರ್ 2008 (13:20 IST)
ಇಂಧನ ಸಚಿವ ಕೆ.ಎಸ್. ಈಶ್ವರಪ್ಪ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದ ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ಆರ್. ವರ್ತೂರ್ ಪ್ರಕಾಶ್ ಇದೀಗ ತಮ್ಮ ವರ್ತನೆಯನ್ನು ಬದಲಾಯಿಸಿದ್ದಾರೆ.

ಸಚಿವರ ಬಗ್ಗೆ ಇನ್ನು ಮುಂದೆ ಯಾವುದೇ ಹೇಳಿಕೆ ನೀಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸಚಿವ ಈಶ್ವರಪ್ಪ ಅವರನ್ನು ಸಂಪುಟದಿಂದ ಕೈಬಿಡದಿದ್ದರೆ ಬೆಂಬಲ ವಾಪಸ್ ಕುರಿತು ಪುನರ್ ಪರಿಶೀಲನೆ ನಡೆಸಲಾಗುವುದು ಎಂದು ಹೇಳಿಕೆ ನೀಡಿದ್ದ ವರ್ತೂರು ಪ್ರಕಾಶ್ ಭಿನ್ನರಾಗ ಹಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಕನಕ ಜಯಂತಿ ಸಮಾರಂಭಕ್ಕೆ ಕುರುಬ ಜನಾಂಗದ ಜನಪ್ರತಿನಿಧಿಗಳನ್ನು ಆಹ್ವಾನಿಸುವ ಮೂಲಕ ಈಶ್ವರಪ್ಪ ಜಾತಿ ಶತ್ರುವಾಗಿ ಬಿಂಬಿತವಾಗಿದ್ದರು. ಇದು ನನಗೆ ಅವರ ಬಗ್ಗೆ ಅಸಮಾಧಾನ ಮೂಡಲು ಕಾರಣವಾಗಿತ್ತು. ಈ ನಿಟ್ಟಿನಲ್ಲಿ ಈ ರೀತಿ ಹೇಳಿಕೆ ನೀಡಿದ್ದೆ. ಈಗ ಅಸಮಾಧಾನವನ್ನು ಯಡಿಯೂರಪ್ಪ ಬಗೆಹರಿಸಿದ್ದಾರೆ. ಇನ್ನು ಅವರ ಬಗ್ಗೆ ಯಾವುದೇ ಹೇಳಿಕೆ ನೀಡುವುದಿಲ್ಲ ಎಂದು ವರ್ತೂರ್ ಪ್ರಕಾಶ್ ಸ್ಪಷ್ಟಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ