ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಪ್ರಿನ್ಸಿಪಾಲರ ವಿರುದ್ಧ ದೂರು

ಸೋಮವಾರ, 31 ಮಾರ್ಚ್ 2014 (19:54 IST)
ತುಮಕೂರು: ಇಲ್ಲಿನ ಗ್ರಾಮದ ಸರ್ಕಾರಿ ಕಾಲೇಜೊಂದರ ಪಿಯುಸಿ ವಿದ್ಯಾರ್ಥಿನಿ ಕಾಲೇಜಿನ ಪ್ರಾಂಶುಪಾಲರ ವಿರುದ್ಧ ಲೈಂಗಿಕ ದೌರ್ಜನ್ಯದ ಕೇಸನ್ನು ಹಾಕಿದ್ದಾಳೆ. ಆರೋಪಿ ಪಾಂಡುರಂಗಯ್ಯ ಅವರನ್ನು ಇತ್ತೀಚೆಗೆ ಪಟ್ಟನಾಯಕನಹಳ್ಳಿ ಗ್ರಾಮದ ಸರ್ಕಾರಿ ಪಿಯು ಕಾಲೇಜಿಗೆ ಪ್ರಿನ್ಸಿಪಾಲ್ ಹುದ್ದೆಗೆ ಬಡ್ತಿ ನೀಡಲಾಗಿತ್ತು. ಕಾಲೇಜು ಸಮಾರಂಭದ ಸಂದರ್ಭದಲ್ಲಿ ಪ್ರಾಂಶುಪಾಲರು ಬಾಲಕಿಯನ್ನು ತಮ್ಮ ಕೊಠಡಿಗೆ ಕರೆಸಿಕೊಂಡು ಅವಳ ಜತೆ ಅಶ್ಲೀಲವಾಗಿ ವರ್ತಿಸಿದರು ಎಂದು ಪೊಲೀಸರು ಹೇಳಿದರು. ನಂತರ ಬಾಲಕಿಯನ್ನು ಸಮಾಧಾನಪಡಿಸಲು ಹಣದ ಆಮಿಷವೊಡ್ಡಿ ಬಾಯಿ ಮುಚ್ಚಿಕೊಂಡಿರುವಂತೆ ಹೇಳಿದರು. ನೀನು ಬಡವಿಯಾಗಿದ್ದರಿಂದ ನನಗೆ ಏನೂ ಮಾಡಲು ಆಗುವುದಿಲ್ಲ ಎಂದು ಹೆದರಿಸಿದ್ದರು ಎಂದು ಬಾಲಕಿ ದೂರಿನಲ್ಲಿ ತಿಳಿಸಿದ್ದಾಳೆ.

ಪಾಂಡುರಂಗಯ್ಯ ಬಾಲಕಿಯ ತಂದೆಗೆ ಕೂಡ ಹಣದ ಆಮಿಷವನ್ನು ಒಡ್ಡಿದರು. ಆದರೆ ಅದನ್ನು ಸ್ವೀಕರಿಸಲು ಅವರು ನಿರಾಕರಿಸಿದ್ದರು. ಈಗ ಪ್ರಾಂಶುಪಾಲರು ತಲೆತಪ್ಪಿಸಿಕೊಂಡಿದ್ದು, ಪೊಲೀಸರು ಅವರಿಗಾಗಿ ಹುಡುಕುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ