ವೃದ್ದೆಯನ್ನು ಕಟ್ಟಿಹಾಕಿ ಚಿನ್ನಾಭರಣ ದೋಚಿದ ದುಷ್ಕರ್ಮಿಗಳು

ಶನಿವಾರ, 23 ನವೆಂಬರ್ 2013 (16:22 IST)
PR
PR
ಮೈಸೂರು: ಮೈಸೂರಿನ ಆಲನಹಳ್ಳಿ ಬಡವಾಣೆಯಲ್ಲಿ ಸೊಸೆ ಹೊರಗೆ ಹೋಗಿದ್ದ ಸಂದರ್ಭದಲ್ಲಿ ಮೂವರು ದುಷ್ಕರ್ಮಿಗಳು ಒಳಗೆ ನುಗ್ಗಿ ಮನೆಯಲ್ಲಿದ್ದ ಸಣ್ಣಮ್ಮ ಎಂಬ ವೃದ್ಧೆಯನ್ನು ಕಟ್ಟಿಹಾಕಿ ಚಿನ್ನಾಭರಣ ಮತ್ತು ನಗದು ಹಣವನ್ನು ದೋಚಿದ್ದಾರೆ. ಮನೆಯಲ್ಲಿ ಚಲನವಲನಗಳ ಬಗ್ಗೆ ಗಮನವಹಿಸಿದ್ದ ದುಷ್ಕರ್ಮಿಗಳು, ಸೊಸೆ ಹೊರಗೆ ಹೋದ ಕೂಡಲೇ ವೃದ್ಧೆ ಒಬ್ಬಳೇ ಇರುವುದನ್ನು ಖಚಿತಪಡಿಸಿಕೊಂಡು ಮನೆಯೊಳಗೆ ನುಗ್ಗಿದ್ದರು.

ಸೊಸೆ ಮನೆಗೆ ಬಂದಾಗ ಅತ್ತೆಯ ಕೈಕಾಲು ಕಟ್ಟಿಹಾಕಿದ್ದನ್ನು ನೋಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸುತ್ತಿದ್ದು, ತನಿಖೆ ಮಾಡುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ