ಪುತ್ತೂರಿನ ಮುತ್ತು ಎಂದೇ ಖ್ಯಾತರಾಗಿದ್ದ ದೇಶದ ಹೆಸರಾಂತ ವೇಟ್ ಲಿಪ್ಟರ್ ಸತೀಶ್ ರೈ ತನ್ನ ಸ್ಥಾನದಲ್ಲಿ ಮುಂದುವರಿಯುವುದು ಕಷ್ಟವಾಗಲಿದೆ.
ರಾಷ್ಟ್ರೀಯ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಅವರು ಮಾದಕ ದ್ರವ್ಯ ಸೇವಿಸಿ ತಪ್ಪು ಮಾಡಿದ್ದು ಶಾಶ್ವತ ನಿಷೇಧವಾಗುವ ಸಾಧ್ಯತೆಯಿದೆ.
ಮ್ಯಾಮಚೆಸ್ಟರ್ ನಲ್ಲಿ 2002ರಲ್ಲಿ ನಡೆದಿದ್ದ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಮಾದಕ ದ್ರವ್ಯ ಸೇವಿಸಿ ಸಿಕ್ಕಿಬಿದ್ದಿದ್ದ ಸತೀಶ್ ಅವರಿಂದ ಎರಡು ಚಿನ್ನದ ಹಾಗೂ ಒಂದು ಕಮಚಿನ ಪದಕ ಹಿಂಪಡೆಯಲಾಗಿತ್ತು.
ಇತ್ತೀಚೆಗೆ ನಡೆದ ರಾಷ್ಟ್ರೀಯ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಅವರು ಇದೇ ತಪ್ಪನ್ನು ಮುಂದುವರಿಸಿದ್ದ ಬಗ್ಗೆ ಅಧಿಕಾರಿಗಳು ಅವರನ್ನು ಪರೀಕ್ಷೆಗೆ ಒಡ್ಡಿದ್ದರು.
ಆರೋಪದಲ್ಲಿ ಸಾಬೀತಾದರೆ ಅಂತಾರಾಷ್ಟ್ರೀಯ ವೇಟ್ ಲಿಪ್ಟಿಂಗ್ ಒಕ್ಕೂಟ, ಸತೀಶ್ ರೈಗೆ ಆಜೀವ ನಿಷೇಧ ಒಡ್ಡುವ ಸಾಧ್ಯತೆಯಿದೆ.