ಶಾಂತಮ್ಮನವರ ಅಳಲಿಗೆ ಸ್ಪಂದಿಸಿ 50 ಸಾವಿರ ಚೆಕ್ ನೀಡಿದ ದುನಿಯಾ ವಿಜಯ್‌.

ಮಂಗಳವಾರ, 22 ಅಕ್ಟೋಬರ್ 2013 (12:37 IST)
PR
PR
"ನನಗೆ ಉಡಲು ಒಂದು ಸೀರೆ ಕೊಡಿಸಿ.. ಸ್ನಾನ ಮಾಡಲು ಒಂದೇ ಒಂದು ಬಕೇಟು ಕೊಡಿಸಿ ಎಂದು ಸಿಎಂ ಸಿದ್ರಾಮಯ್ಯನವರಲ್ಲಿ ಅಳಲು ತೋಡಿಕೊಂಡ ಹಿರಿಯ ನಟಿಯವರಿಗೆ ದುನಿಯಾ ವಿಜಯ್ ಸಹಾಯ ಹಸ್ತವನ್ನು ಚಾಚಿದ್ದಾರೆ. ಹಿರಿಯ ನಟಿಯ ಸಂಕಷ್ಟಕ್ಕೆ 50 ಸಾವಿರ ರೂಪಾಯಿಗಳ ಚೆಕ್ ನೀಡುವುದರ ಮೂಲಕ ದುನಿಯಾ ವಿಜಯ್ ಮಾನವೀಯತೆ ಮೆರೆದಿದ್ದಾರೆ.

ಇಂದು ಮುಂಜಾನೆ ಸಿಎಂ ಗೃಹ ಕಛೆರಿ ಕೃಷ್ಣಾದಲ್ಲಿ ಆಯೋಜಿಸಲಾಗಿದ್ದ ಜನತಾದರ್ಶನಲ್ಲಿ ಪಾಲ್ಗೊಂಡಿದ್ದ ನಟಿ ಶಾಂತಮ್ಮನವರು ಸಿಎಂ ಸಿದ್ರಾಮಯ್ಯನವರನ್ನು ಭೇಟಿ ಮಾಡಿ ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಅವರಲ್ಲಿ ಹೇಳಿಕೊಂಡರು.
ಹಿರಿಯ ನಟಿಯವರ ಆರ್ಥಿಕ ಪರಿಸ್ಥಿತಿಯನ್ನು ಅರಿತ ದುನಿಯಾ ವಿಜಯ್ ಅವರು ತಕ್ಷಣವೇ 50 ಸಶಾವಿರ ರೂಪಾಯಿಗಳ ಚೆಕ್‌ ಅನ್ನು ಶಾಂತಮ್ಮನವರಿಗೆ ನೀಡಿದ್ದಾರೆ.

"ನಾನು ಶೂಟಿಂಗ್‌ನಲ್ಲಿ ಬಿಸಿ ಇದೀನಿ. ಆದ್ರೆ ಅವರ ಪರಿಸ್ಥಿತಿಯನ್ನು ಕೇಳಿ ನನ್ನ ಮನಸ್ಸು ಮಿಡಿಯುತ್ತಿದೆ. ಹಿರಿಯ ಕಲಾವಿದರಿಗೆ ಇಂಥ ಪರಿಸ್ಥಿತಿ ಬರಬಾರದಿತ್ತು. ಆದರೂ ಕೂಡ ಅವರೊಂದಿಗೆ ನಾವಿದ್ದೀವಿ.. ಅವರ ಹಿಂದೆ ಕನ್ನಡ ಚಿತ್ರರಂಗ ಇದೆ ಎಂದು ಹೇಳುವುದರ ಮೂಲಕ ಭರವಸೆಯನ್ನು ನೀಡಿದ್ದಾರೆ. ಅಷ್ಟೇ ಅಲ್ಲ, ತಕ್ಷಣವೇ 50 ರೂಪಾಯಿಗಳ ಚೆಕ್‌ ಅನ್ನು ಕಳಿಸಿಕೊಡುತ್ತಿದ್ದೇನೆ. ಇದನ್ನು ತಕ್ಷಣ ಕ್ಯಾಶ್ ಮಾಡಿಕೊಂಡು ಸದ್ಯದ ಪರಿಸ್ಥಿತಿಯನ್ನು ನಿಭಾಯಿಸಿಕೊಳ್ಳಲಿ. ನಂತರ ನಾನು ಅವರನ್ನು ಖುದ್ದಾಗಿ ಹೋಗಿ ಭೆಟಿ ಮಾಡುತ್ತೇನೆ ಎಂದು ನಟ ದುನಿಯಾ ವಿಜಯ್‌ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ