ಸಿಂಧ್ಯಾ, ತೇಜಸ್ವಿನಿ, ರಾಜೂಗೌಡ ಬಿಜೆಪಿಗೆ: ಈಶ್ವರಪ್ಪ ಬಾಂಬ್

ಮಂಗಳವಾರ, 25 ಫೆಬ್ರವರಿ 2014 (12:42 IST)
PR
PR
ವಿವಿಧ ಪಕ್ಷಗಳಿಗೆ ಸೇರಿದ ಅನೇಕ ಮುಖಂಡರು ಬಿಜೆಪಿ ಸಂಪರ್ಕದಲ್ಲಿದ್ದು, ಸದ್ಯದಲ್ಲೇ ನಮ್ಮ ಪಕ್ಷದ ಮಡಿಲಿಗೆ ಸೇರಲಿದ್ದಾರೆ ಎಂದು ಎಂದು ಮಾಜಿ ಡಿಸಿಎಂ ಈಶ್ವರಪ್ಪ ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಬಾಂಬ್ ಸಿಡಿಸಿದ್ದಾರೆ. ಪಿ.ಜಿ.ಆರ್. ಸಿಂಧ್ಯಾ, ಮಾಜಿ ಶಾಸಕ ರಾಜೂಗೌಡ, ಪ್ರಮೋದ್ ಮುತಾಲಿಕ್, ತೇಜಸ್ವಿನಿ ರಮೇಶ್, ಬಾಬಾ ಗೌಡ ಪಾಟೀಲ್ ಮುಂತಾದ ವಿವಿಧ ಪಕ್ಷಗಳ ಮುಖಂಡರು ಬಿಜೆಪಿ ಸಂಪರ್ಕದಲ್ಲಿದ್ದು ಸದ್ಯದಲ್ಲೇ ಬಿಜೆಪಿಗೆ ಸೇರಲಿದ್ದಾರೆ ಎಂದು ಈಶ್ವರಪ್ಪ ಹೇಳಿದರು. ರಾಜೂಗೌಡ ಅವರು ಈಗಾಗಲೇ ಬಿಜೆಪಿಗೆ ಸೇರುವುದು ಖಚಿತವಾಗಿದೆ.

ಪಿ.ಜಿ.ಆರ್. ಸಿಂಧ್ಯಾ ಕೂಡ ಬಿಜೆಪಿಗೆ ಸೇರುವ ಬಗ್ಗೆ ಒಲವು ವ್ಯಕ್ತಪಡಿಸಿದ್ದಾರೆ. ಪ್ರಮೋದ್ ಮುತಾಲಿಕ್ ಕೂಡ ಮೋದಿಯ ಬಗ್ಗೆ ಒಳ್ಳೆಯ ಮಾತನಾಡಿರುವುದು ಬಿಜೆಪಿ ಪಕ್ಷಕ್ಕೆ ಸೇರುವ ಲಕ್ಷಣಗಳು ಹೆಚ್ಚಾಗಿವೆ ಎಂದು ಹೇಳಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ