ಮಂಡ್ಯ: ಸೋನಿಯಾ ಮೇಡಂ ಬರುತ್ತಾರೆಂದು ತಿಳಿದ ಕೂಡಲೇ ಮಂಡ್ಯದ ಜನರು ಓಡೋಡಿ ಬಂದರು. ಆದರೆ ಸೋನಿಯಾಗಿಂತ ಮುಂಚೆ ವೇದಿಕೆಗೆ ಬಂದವರು ಸಿದ್ದರಾಮಯ್ಯ. ಆದರೆ ಸಿದ್ದರಾಮಯ್ಯ ಅವರ ಪಂಚೆ ಸ್ವಲ್ಪ ಜಾರಿಹೋಗಿತ್ತು. ಆದರೆ ಲಕ್ಷಾಂತರ ಜನರ ಮುಂದೆ ಸಿದ್ದು ಪಂಚೆಯನ್ನು ಬಿಗಿದು ಗಟ್ಟಿಯಾಗಿ ಕಟ್ಟಿಕೊಂಡರು. ಎಸ್.ಎಂ. ಕೃಷ್ಣ ಅವರಿಗೆ ಸಿದ್ದರಾಮಯ್ಯ ಪಕ್ಕದಲ್ಲಿ ಕುರ್ಚಿ ನಿಗದಿಯಾಗಿತ್ತು. ಆದರೆ ಎಸ್.ಎಂ. ಕೃಷ್ಣ ಸೋನಿಯಾ ಮತ್ತು ಅಂಬರೀಷ್ ಮಧ್ಯೆ ಕುಳಿತಿದ್ದವರು ಎದ್ದುಬಂದು ಸಿದ್ದು ಪಕ್ಕದಲ್ಲಿ ಕುಳಿತರು.
ನೂತನ ಸಂಸದೆ ರಮ್ಯಾ ಸ್ಟೇಜ್ ಮೇಲೆ ಕುಳಿತುಕೊಂಡೇ ಮೊಬೈಲ್ ಕ್ಯಾಮೆರಾದಲ್ಲಿ ಶೂಟ್ ಮಾಡೋಕೆ ಶುರು ಮಾಡಿದ್ರು ಮತ್ತು ಫೋಟೋ ತೆಗೆಯೋದ್ರಲ್ಲಿ ರಮ್ಯಾ ಮೇಡಂ ಬ್ಯುಸಿಯಾಗಿದ್ದರು. ಸಮಾವೇಶದಲ್ಲಿ ಭಾಗವಹಿಸಿದ ಲಕ್ಷಾಂತರ ಜನರಿಗೆ ಲಡ್ಡು ಹಂಚುವ ಕಾರ್ಯಕ್ರಮವಿತ್ತು. ಲಡ್ಡುಗಳನ್ನು ಹಂಚುವಾಗ ಕಾರ್ಯಕರ್ತರು ಲಡ್ಡುಗಳನ್ನು ಕ್ಯಾಚ್ ಹಿಡಿಯುವುದಕ್ಕೆ ಪೈಪೋಟಿಗಿಳಿಯುತ್ತಿದ್ದರು. ಒಟ್ಟಿನಲ್ಲಿ ಸೋನಿಯಾ ಸಭೆ ಸ್ವಾರಸ್ಯಕರ ಘಟನೆಗಳಿಗೆ ಸಾಕ್ಷಿಯಾಯಿತು.