ಸಿದ್ದರಾಮಯ್ಯ ಇನ್ 'ಸಿದ್ದು' ಸಾಕ್ಷ್ಯಚಿತ್ರ ರಿಲೀಸ್‌ಗೆ ಸಿದ್ದ

ಬುಧವಾರ, 28 ಡಿಸೆಂಬರ್ 2011 (12:06 IST)
PR
ರಾಜ್ಯ ವಿಧಾನಸಭೆ ಪ್ರತಿಪಕ್ಷ ನಾಯಕ, ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಈಗ ಸಿದ್ದು ಆಗಿದ್ದಾರೆ...ವಿಷಯ ಏನಪ್ಪಾ ಅಂದ್ರೆ ಸಿದ್ದರಾಮಯ್ಯ ಅವರ ಬದುಕಿನ ಆಯಾಮ ಬಿಂಬಿಸುವ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಸಿದ್ದವಾಗಿದೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಶ್ರೀನಿವಾಸ್ ಕರಿಯಪ್ಪ ಎಂಬುವರು 45 ನಿಮಿಷಗಳ ಸಾಕ್ಷ್ಯಚಿತ್ರವನ್ನು ಸಿದ್ದಪಡಿಸಿದ್ದು, ಬುಧವಾರ ಮೈಸೂರಿನಲ್ಲಿ ಆಹ್ವಾನಿತರಿಗಾಗಿ ಮೊದಲ ಪ್ರದರ್ಶನವಿದೆ.

ಸಿದ್ದರಾಮನಹುಂಡಿಯಿಂದ ಆರಂಭಗೊಂಡು ಕೆಲ ದಿನಗಳ ಹಿಂದೆ ನಡೆದ ಗಣಿ ಗದ್ದಲದ ಭಾಗವಾದ ಬಳ್ಳಾರಿ ಪಾದಯಾತ್ರೆವರೆಗೆ ಸಾಕ್ಷ್ಯಚಿತ್ರದಲ್ಲಿ ಸಿದ್ದರಾಮಯ್ಯ ಅವರನ್ನು ಚಿತ್ರಿಸಲಾಗಿದೆ. ಹುಟ್ಟು, ಬೆಳವಣಿಗೆ, ಶಿಕ್ಷಣ, ಕಾನೂನು ವೃತ್ತಿ, ರಾಜಕೀಯ ಅಧಿಕಾರಾವಧಿ, ಪದಚ್ಯುತಿ, ಏಳು-ಬೀಳು ಹೀಗೆ ನಾನಾ ವಿಷಯ ಅನಾವರಣಗೊಂಡಿದೆ.

ಮೂಲತಃ ಮೈಸೂರು ತಾಲೂಕು ಪುಟ್ಟೇಗೌಡನ ಹುಂಡಿಯವರಾದರೂ ಸದ್ಯ ಬೆಂಗಳೂರಿನಲ್ಲಿ ನೆಲೆಸಿರುವ ಶ್ರೀನಿವಾಸ್ ಅವರು ಸಿದ್ದರಾಮಯ್ಯನವರ ಮೇಲಿನ ವಿಶೇಷ ಪ್ರೀತಿಗೆ ಈ ಸಾಕ್ಷ್ಯಚಿತ್ರವನ್ನು ತಯಾರಿಸಿರುವುದಾಗಿ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ