ಸಿದ್ದರಾಮಯ್ಯ ನಿನಗೆ ಮದ ಬಂದಿದೆ :ಯಡ್ಡಿ ಮತ್ತೆ ಏಕವಚನ ಪ್ರಯೋಗ

ಬುಧವಾರ, 27 ನವೆಂಬರ್ 2013 (15:15 IST)
PR
PR
ಬೆಳಗಾವಿ: ಸಿಎಂ ಸಿದ್ದರಾಮಯ್ಯ ವಿರುದ್ಧ ಯಡಿಯೂರಪ್ಪ ಮತ್ತೆ ಏಕವಚನ ಪ್ರಯೋಗಿಸುವ ಮೂಲಕ ತಮ್ಮ ಹಿಂದಿನ ಚಾಳಿಯನ್ನು ಮುಂದುವರಿಸಿದ್ದಾರೆ. 'ಸಿದ್ದರಾಮಯ್ಯ ನಿನ್ನ ಅಹಂಕಾರಕ್ಕೆ ರೈತ ಬಲಿಯಾಗಿದ್ದಾನೆ. ಕಾಂಗ್ರೆಸ್ ಸರ್ಕಾರದಿಂದ ರೈತರಿಗೆ ಅನಿಷ್ಠ ಕಾದಿದೆ. ನೀವು ಕೂಡಲೇ ರಾಜೀನಾಮೆ ನೀಡಿ' ಎಂದು ಯಡಿಯೂರಪ್ಪ ಬೆಳಗಾವಿ ಸದನದಲ್ಲಿ ಆಗ್ರಹಿಸಿದರು. ರಾಯಭಾಗದ ಕಂಕನವಾಡಿ ಗ್ರಾಮದ ರೈತ ವಿಠಲ್ ಅರಬಾವಿ ಸುವರ್ಣಸೌಧದ ಮುಂಭಾಗ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರಿಂದ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನಹಿನ್ನೆಲೆಯಲ್ಲಿ ಯಡಿಯೂರಪ್ಪ ಆಕ್ರೋಶಭರಿತರಾಗಿ ಮುಖ್ಯಮಂತ್ರಿಯನ್ನು ತರಾಟೆಗೆ ತೆಗೆದುಕೊಂಡರು. ಸಿದ್ದರಾಮಯ್ಯ ರಾಜೀನಾಮೆ ನೀಡಿ ಮೈಸೂರಿಗೆ ತೆರಳಿ, ರೈತರಿಗೆ ಸ್ಪಷ್ಟ ಭರವಸೆ ನೀಡಲು ವಿಫಲರಾಗಿದ್ದೀರಿ.

ನಿನ್ನ ಅಹಂಕಾರಕ್ಕೆ ರೈತ ಬಲಿಯಾಗಿದ್ದಾನೆ. ಯಾವ ವಿಚಾರಕ್ಕೂ ಸರ್ಕಾರ ಸ್ಪಂದಿಸುತ್ತಿಲ್ಲ. ಸಿದ್ದರಾಮಯ್ಯ ಹಣ ನೀಡಿದ್ದರೆ ಅವರ ಜೇಬಿನಿಂದ ಖರ್ಚಾಗುತ್ತಿರಲಿಲ್ಲ ಎಂದು ಯಡಿಯೂರಪ್ಪ ವಾಗ್ದಾಳಿ ಮಾಡಿದರು. ಬರೀ ಸೊಕ್ಕು, ದೌರ್ಜನ್ಯದ ಮಾತುಗಳೇ ಕೇಳಿಬರುತ್ತಿವೆ. ಸೌಜನ್ಯದ ಮಾತುಗಳೇ ಇಲ್ಲ. ಕೂಡಲೇ ರಾಜೀನಾಮೆ ನೀಡಿ ಎಂದು ಯಡಿಯೂರಪ್ಪ ಸದನದಲ್ಲಿ ಆಗ್ರಹಿಸಿದರು.

ವೆಬ್ದುನಿಯಾವನ್ನು ಓದಿ