ಸಿದ್ದರಾಮಯ್ಯ 300 ಕೋಟಿ ಅಡ್ವಾನ್ಸ್ ಪಡೆದಿದ್ದಾರೆ: ಕುಮಾರಸ್ವಾಮಿ ಆರೋಪ

ಮಂಗಳವಾರ, 8 ಏಪ್ರಿಲ್ 2014 (12:20 IST)
PR
PR
ಶಿವಮೊಗ್ಗ: ನಮ್ಮದು ಕುಟುಂಬ ರಾಜಕಾರಣವಲ್ಲ, ಜನರಿಂದ ಆಯ್ಕೆಯಾದ್ರೆ ಕುಟುಂಬ ರಾಜಕಾರಣವಾಗಲ್ಲ ಎಂದು ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಕುಮಾರಸ್ವಾಮಿ ಹೇಳಿದ್ದಾರೆ. ಭವಾನಿ ರೇವಣ್ಣ, ನಿಖಿಲ್ ಗೌಡ ಸ್ಪರ್ದೆ ವಿಚಾರವಾಗಿ ಮಾತನಾಡುತ್ತಾ ಅವರು ತಿಳಿಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತವನ್ನು ಟೀಕಿಸುತ್ತಾ, ವಿದ್ಯುತ್ ಖರೀದಿ ದರ 2.00ರಿಂದ 4.50 ರೂ.ಗೆ ಏರಿಕೆ ಮಾಡಿ, 300 ಕೋಟಿ ರೂ. ಅಡ್ವಾನ್ಸ್ ಪಡೆದಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ದ ಕುಮಾರಸ್ವಾಮಿ ಆರೋಪಿಸಿದರು.

ಈ ಬಾರಿಯೂ ಕ್ಷೇತ್ರದಲ್ಲಿ ಹಣ ಹರಿದಾಡಲಿದೆ. ನಮಗೆ ಹಣವೇ ಸ್ಪರ್ಧಿ, ಬಿಎಸ್‌ವೈ ಅಲ್ಲ ಎಂದು ಕುಮಾರಸ್ವಾಮಿ ಹೇಳಿದರು.

ವೆಬ್ದುನಿಯಾವನ್ನು ಓದಿ