'ಸಿಸಿಟಿವಿ ದೃಶ್ಯ ಪ್ರಸಾರದಿಂದ ದಾಳಿಕೋರ ತಪ್ಪಿಸಿಕೊಳ್ಳಲು ನೆರವಾಗ್ತಿದೆ'

ಮಂಗಳವಾರ, 26 ನವೆಂಬರ್ 2013 (12:55 IST)
PR
PR
ಬೆಂಗಳೂರು: ಎಟಿಎಂನಲ್ಲಿ ದಾಳಿಯ ಸಿಸಿಟಿವಿ ದೃಶ್ಯಗಳನ್ನು ಮಾಧ್ಯಮ ಪ್ರಸಾರ ಮಾಡುವುದರಿಂದ ತನಿಖೆಗೆ ಹಿನ್ನಡೆಯಾಗುತ್ತಿದ್ದು, ದಾಳಿಕೋರ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ತಪ್ಪಿಸಿಕೊಳ್ಳಲು ನೆರವಾಗುತ್ತಿದೆ ಎಂದು ಎಟಿಎಂ ದುಷ್ಕರ್ಮಿಯನ್ನು ಹಿಡಿಯಲು ಸ್ಥಾಪಿಸಲಾದ ಜಂಟಿ ತಂಡ ಭಾವಿಸಿದೆ. ಸುಮಾರು 200 ಪೊಲೀಸರು ದುಷ್ಕರ್ಮಿಯನ್ನು ಭೇಟೆಯಾಡುತ್ತಿದ್ದರೂ, ಅವನು ತಪ್ಪಿಸಿಕೊಂಡು ತಿರುಗುತ್ತಿದ್ದಾನೆ.ಅವನು ಸತತವಾಗಿ ಒಂದು ಕಡೆಯಿಂದ ಇನ್ನೊಂದು ಕಡೆ ಸ್ಥಳ ಬದಲಾಯಿಸುತ್ತಿದ್ದಾನೆ.

ಬಹುಶಃ ಬಿಸಿ ಆರುವ ತನಕ ಯಾವುದಾದರೂ ಸುರಕ್ಷಿತ ಮನೆಯಲ್ಲಿ ಅಡಗಿರಬಹುದು ಎಂದು ತನಿಖಾಧಿಕಾರಿ ಹೇಳಿದ್ದಾರೆ. ಜೆಸಿ ರಸ್ತೆಯ ದಾಳಿಗೆ 10 ದಿನಕ್ಕಿಂತ ಮುಂಚೆ ಆಂಧ್ರಪ್ರದೇಶದ ಕದಿರಿ ನಿವಾಸಿ ಪ್ರಮೀಳಮ್ಮನ ಮೇಲೆ ದಾಳಿ ನಡೆಸಿ ಅವರಿಂದ ಎರಡು ಎಟಿಎಂ ಕಾರ್ಡ್‌ಗಳನ್ನು ಕದ್ದಿದ್ದನು.

ವೆಬ್ದುನಿಯಾವನ್ನು ಓದಿ