ಹಣ ತೆಗೆದುಕೊಂಡು ನಿವೇಶನ ನೀಡಿಲ್ಲ: ಅಂಬಿ ಆಪ್ತರ ವಿರುದ್ಧ ದೂರು

ಮಂಗಳವಾರ, 24 ಡಿಸೆಂಬರ್ 2013 (15:25 IST)
PR
PR
ಬೆಂಗಳೂರು:ಅಮರಾವತಿ ಡೆವಲಪರ್ಸ್ ಮಾಲೀಕರಾಗಿರುವ, ಸಚಿವ ಅಂಬರೀಶ್ ಆಪ್ತ ಚಂದ್ರಶೇಖರ್ ವಿರುದ್ಧ ಗವರ್ನರ್‌ಗೆ ದೂರು ನೀಡಲಾಗಿದೆ. ಪೊಲೀಸರು ಮತ್ತು ಶಿಕ್ಷಕರಿಗೆ ನಿವೇಶನ ನೀಡುವುದಾಗಿ ಒಪ್ಪಂದ ಮಾಡಿಕೊಂಡು ಅನೇಕ ವರ್ಷಗಳಾದರೂ ಯಾವೊಂದು ಕ್ರಮವನ್ನೂ ಕೈಗೊಂಡಿಲ್ಲ ಎಂದು ದೂರಲಾಗಿದೆ. ಮಂಡ್ಯ ಜಿಲ್ಲಾ ಪೊಲೀಸ್ ಗೃಹನಿರ್ಮಾಣ ಮತ್ತು ಮಂಡ್ಯ ಜಿಲ್ಲಾ ಶಿಕ್ಷಕರ ಗೃಹನಿರ್ಮಾಣ ಸಂಘದ ಸದಸ್ಯರಿಗೆ ನಿವೇಶನ ನೀಡುವುದಾಗಿ ಹೇಳಿ ವಿಳಂಬ ಮಾಡಿದ್ದಾರೆ.

ಅಮರಾವತಿ ಡೆವಲಪರ್ಸ್ ಮಾಲೀಕರಾದ ಚಂದ್ರಶೇಖರ್ ಲ್ಯಾಂಡ್ ವ್ಯಾಲ್ಯೂವನ್ನು ಕೂಡ ಕಡಿಮೆ ತೋರಿಸಿದ್ದಾರೆ ಎಂದು ದೂರಲಾಗಿದೆ. ಕಳೆದ ನಾಲ್ಕುವರ್ಷಗಳ ಹಿಂದೆ ಸುಮಾರು 19 ಕೋಟಿ ರೂ. ಹಣ ತೆಗೆದುಕೊಂಡು ಯಾವುದೇ ನಿವೇಶನ ನೀಡಿಲ್ಲ ಎಂದು ರಾಜ್ಯಪಾಲರಿಗೆ ದೂರಲಾಗಿದೆ.

ವೆಬ್ದುನಿಯಾವನ್ನು ಓದಿ