ಹಾಲಪ್ಪ, ಕುಮಾರ್ ಬಂಗಾರಪ್ಪರ ಠೇವಣಿ ಕಳೆಯಿರಿ: ಮಧು ಬಂಗಾರಪ್ಪ

ಶುಕ್ರವಾರ, 3 ಮೇ 2013 (10:56 IST)
PR
PR
ಜನತೆ ತಮಗೆ ಕೊಟ್ಟ ಅವಕಾಶವನ್ನು ಸೊರಬ ತಾಲೂಕಿನ ಅಭಿವೃದ್ದಿಗೆ ಮೀಸಲಿಡದೆ ವೃಥಾ ಕಾಲಹರಣ ಮಾಡಿರುವ ಮಾಜಿ ಸಚಿವರುಗಳಾದ ಹರತಾಳು ಹಾಲಪ್ಪ ಹಾಗೂ ಕುಮಾರ್ ಬಂಗಾರಪ್ಪರ ಠೇವಣಿ ಕಳೆಯಿರಿ ಎಂದು ಮತದಾರರಿಗೆ ಮನವಿ ಮಾಡಿರುವ ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ, ಎಸ್‌. ಬಂಗಾರಪ್ಪನವರ ನಂತರ ತಾಲೂಕಿನ ಜನತೆ ನಾಯಕತ್ವದ ಉಸ್ತುವಾರಿಯನ್ನು ಈ ಬಾರಿ ನನಗೆ ನೀಡಲಿದ್ದಾರೆ. ಇಲ್ಲಿ ಮೂರನೇ ವ್ಯಕ್ತಿಗೆ ಅವಕಾಶವಿಲ್ಲ ಎಂದು ಹೇಳಿದ್ದಾರೆ.

ತಾಲೂಕಿನ ಗುಡವಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ತಾವು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಸೇರಿದ್ದ ಆಪಾರ ಜನಸ್ತೋಮವನ್ನು ಕಂಡು ಮತಿಭ್ರಮಣೆಗೊಳಗಾಗಿರುವ ಹರತಾಳು ಹಾಲಪ್ಪ ಬಾಡಿಗೆ ಜನರನ್ನು ಕರೆ ತಂದಿದ್ದಾರೆಂದು ಟೀಕಿಸಿದ್ದಾರೆ. ತಮ್ಮ ಬಳಿಯಿದ್ದ ಜನ ಖಾಲಿಯಾಗುತ್ತಿರುವುದನ್ನು ಕಂಡು ಹತಾಶೆಯಿಂದ ಈ ರೀತಿ ಮಾತನಾಡುತ್ತಿದ್ದಾರೆಂದು ವ್ಯಂಗ್ಯವಾಡಿದರು.

ಜನರ ತೀಪು ಜೆಡಿಎಸ್‌ ಪರ ಇರುವಾಗ ಯಾರು ಏನೇ ಮಾತನಾಡಿ, ತಮ್ಮ ವಿರುದ್ಧ ದೊಂಬರಾಟ ನಡೆಸಿದರೂ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. 2 ಬಾರಿ ಮಧುವನ್ನು ಸೋಲಿಸಿ ತಪ್ಪು ಎಸಗಿದ್ದೇವೆ ಎಂದು ಬಂಗಾರಪ್ಪ ಅಭಿಮಾನಿಗಳಿಗೆ ಮನವರಿಕೆಯಾಗಿದ್ದು ಈ ಬಾರಿ ಅವರುಗಳೇ ಸ್ವಯಂ ಪ್ರೇರಣೆಯಿಂದ ಛಲ ತೊಟ್ಟು ನನ್ನನ್ನು ಗೆಲ್ಲಿಸಲು ಕಂಕಣಬದ್ದರಾಗಿರುವಾಗ ಎದುರಾಳಿಗಳಿಗೆ ಹೆದರುವ ಅಗತ್ಯವಿಲ್ಲ ಎಂದು ಮಧು ಬಂಗಾರಪ್ಪ ಹೇಳಿದರು.

ವೆಬ್ದುನಿಯಾವನ್ನು ಓದಿ