ಹಿಂದೂತ್ವದ ಉಳಿವಿಗಾಗಿ ಪೇಜಾವರಶ್ರೀ ದಲಿತಕೇರಿಗೆ ಭೇಟಿ

ಶುಕ್ರವಾರ, 27 ಆಗಸ್ಟ್ 2010 (14:51 IST)
NRB
ಹಿಂದೂ ಧರ್ಮದ ಉಳಿವಿಗಾಗಿ ಉಡುಪಿಯ ಪೇಜಾವರಶ್ರೀಗಳು ಶುಕ್ರವಾರ ನಗರದ ಅರಸು ಕಾಲೋನಿಯಲ್ಲಿರುವ ದಲಿತರ ಮನೆಗೆ ಭೇಟಿ ನೀಡಿ ಆಶೀರ್ವಚನ ನೀಡಿದರು.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ

ದಲಿತರು ಸಮಾಜದಲ್ಲಿ ಸಮಾನ ಆದ್ಯತೆ ಪಡೆಯಬೇಕು, ಅಲ್ಲದೇ ಇತರ ಜಾತಿಗಳಿಗಿಂತ ಹೆಚ್ಚಿನ ರೀತಿಯಲ್ಲಿ ಹಿಂದೂತ್ವದ ಉಳಿವಿಗಾಗಿ ಶ್ರಮಿಸಬೇಕು ಎಂದು ದಲಿತರ ಕಾಲೋನಿಯಲ್ಲಿ ಪೇಜಾವರಶ್ರೀಗಳು ಆಶೀರ್ವಚನ ನೀಡಿತ್ತಾ ಕರೆ ನೀಡಿದರು.

ಸಾಮಾಜಿಕ ಸಾಮರಸ್ಯಕ್ಕಾಗಿ ಪಾದಯಾತ್ರೆ ಹಮ್ಮಿಕೊಂಡಿದ್ದ ಪೇಜಾವರಶ್ರೀಗಳು ದಲಿತರ ಕಾಲೋನಿಗೆ ಭೇಟಿ ನೀಡಿ ಅವರ ಕುಶಲೋಪರಿ ವಿಚಾರಿಸಿದರು. ಸ್ವಾಮೀಜಿಗಳು ದಲಿತಕೇರಿಗೆ ಭೇಟಿ ನೀಡಿರುವುದು ತುಂಬಾ ಸಂತಸ ನೀಡಿದೆ ಎಂದು ದಲಿತ ಮುಖಂಡ ಪಳನಿ ಸಂತಸ ವ್ಯಕ್ತಪಡಿಸಿದ್ದಾರೆ.

ಅರಸು ಕಾಲೋನಿಯಲ್ಲಿ ಪೇಜಾವರಶ್ರೀಗಳನ್ನು ಆತ್ಮೀಯವಾಗಿ ಸ್ವಾಗತಿಸಿದರು. ಬೀದಿಗಳನ್ನೆಲ್ಲಾ ಹೂವಿನಿಂದ ಅಲಂಕರಿಸಿದ್ದರು. ಆಶೀರ್ವಚನದ ನಂತರ ಶ್ರೀಗಳು ದಲಿತರಿಗೆ ಹಣ್ಣು, ಹಂಪಲನ್ನು ವಿತರಿಸಿದರು.

ವೆಬ್ದುನಿಯಾವನ್ನು ಓದಿ