ಹಿಂದೂ ದೇವರನ್ನು ಅವಮಾನಿಸಿದ ಬೀದರ್‌ ಡಿಸಿ ನಾಲಿಗೆ ಕತ್ತರಿಸಿ : ಪ್ರಣವಾನಂದ ಸ್ವಾಮಿಜಿ

ಶನಿವಾರ, 23 ನವೆಂಬರ್ 2013 (13:14 IST)
PR
PR
ಹಿಂದೂ ದೇವರನ್ನು ಅವಮಾನಿಸಿದ ಬೀದರ್‌ ಡಿಸಿ ಜಾಫರ್‌ ಅವರ ನಾಲಿಗೆಯನ್ನು ಕತ್ತರಿಸಿ ಹಾಕಿ. ಶ್ರೀರಾಮ ಹಿಂದೂಗಳ ಪರಮೋಚ್ಛ ದೇವರು. ಅವತಾರ ಪುರುಷ. ಹೀಗಿರುವಾಗ ಹಿಂದೂ ದೇವತೆಗಳನ್ನು ಅವಹೇಳನೆ ಮಾಡುವುದರ ಮೂಲಕ ಡಿಸಿ ಜಾಫರ್‌ ಷರೀಫ್‌ ಅವರು ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಹೀಗೆ ಕೋಮು ಭಾವನೆಗಳನ್ನು ಕೆರಳಿಸಿ ಹಿಂದೂಗಳನ್ನು ಅವಮಾನಿಸುತ್ತಿರುವ ಬೀದರ್‌ ಡಿಸಿ ಜಾಫರ್‌ ಅವರ ನಾಲಿಗೆಯನ್ನು ಕತ್ತರಿಸಿ ಹಾಕಬೇಕು ಎಂದು ಪ್ರಣವಾನಂದ ಸ್ವಾಮೀಜಿಗಳು ಹೇಳಿದ್ದಾರೆ.

ಉನ್ನತ ಹುದ್ದೆಯಲ್ಲಿ ಇರುವಂತಹ ವ್ಯಕ್ತಿ ಇಂತಹ ವರ್ತನೆ ತೋರಿರುವುದು ಖೇದನೀಯ. ಶ್ರೀರಾಮ, ಸೀತೆಯವರನ್ನು ಅವಮಾನಿಸುವುದರ ಮೂಲಕ ಡಿಸಿ ಜಾಫರ್‌ ಅವರು ಹಿಂದೂ ದೇವರನ್ನು ಅವಮಾನಿಸಿದ್ದಾರೆ. ಹಿಂದೂ ದೇವತೆಗಳನ್ನು ಅವಮಾನಿಸುವುವ ಇಂತಹ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಡಿಸಿಯವರ ನಾಲಿಗೆ ಕತ್ತರಿಸಿ ಹಾಕಬೇಕು ಎಂದು ಪ್ರಣವಾನಂದ ಸ್ವಾಮಿಜಿಗಳು ಕಠುವಾಗಿ ನುಡಿದಿದ್ದಾರೆ.

ಏನಿದು ಬೀದರ್‌ ಡಿಸಿ ಜಾಫರ್‌ ಅವರ ಅವಾಂತರ?

ಡಿಸಿ ಜಾಫರ್‌ ಅವರು ಶ್ರೀ ರಾಮನನ್ನು ಡ್ಯೂಡ್‌ ಎಂದೂ, ಸೀತೆಯನ್ನು ಬೇಬ್‌ ಎಂದೂ, ಮತ್ತು ಕೌಸಲ್ಯೆಯನ್ನು ಬಿಚ್‌ ಎಂದೂ ಸಂಬೋಧಿಸಿ, ಪೋಸ್ಟ್‌ ಒಂದನ್ನು ತಮ್ಮ ಫೇಸ್‌ಬುಕ್‌ ಅಕೌಂಟಿನಲ್ಲಿ ಪ್ರಕಟಿಸಿದ್ದರು. ಇದರಿಂದ ರೊಚ್ಚಿಗೆದ್ದ ಹಿಂದೂಪರ ಸಂಘಟನೆಗಳನ್ನು ಡಿಸಿ ವಿರುದ್ದ ಕ್ರಮ ಕೈಗೊಳ್ಳುವಂತೆ ದೊಡ್ಡ ಮಟ್ಟದ ಹೋರಾಟವನ್ನು ಮಾಡಿದವು.

ವೆಬ್ದುನಿಯಾವನ್ನು ಓದಿ