'ಹುಡುಗಾಟ'- ಅಪರ್ಣಾ ಚಿತ್ರಮಂದಿರದಲ್ಲಿ ದಾಂಧಲೆ

ಇಳಯರಾಜ

ಶುಕ್ರವಾರ, 8 ಜೂನ್ 2007 (12:39 IST)
ತಾಂತ್ರಿಕ ಕಾರಣಗಳಿಂದ ಚಿತ್ರ ಪ್ರದರ್ಶನಕ್ಕೆ ಅಡ್ಡಿಯಾದ ಹಿನ್ನೆಲೆಯಲ್ಲಿ ಇಂದು ಅಪರ್ಣಾ ಚಿತ್ರಮಂದಿರದಲ್ಲಿ ಪ್ರೇಕ್ಷಕರು ದಾಧಲೆ ನಡೆಸಿದ ಘಟನೆ ಸಂಭವಿಸಿದೆ.

ಮುಂಗಾರು ಮಳೆ ಖ್ಯಾತಿಯ ಗಣೇಶ್ ಅಭಿನಯದ ಹುಡುಗಾಟ ಚಿತ್ರ ಇಂದು ರಾಜ್ಯಾದ್ಯಂತ ಬಿಡುಗಡೆಗೊಂಡಿತ್ತು. ಆದರೆ ಇಂದು ಬೆಳಗ್ಗೆ ಗಾಂಧಿ ನಗರದ ಪ್ರಮುಖ ಚಿತ್ರಮಂದಿರವಾದ ಅಪರ್ಣಾದಲ್ಲಿ ಪ್ರದರ್ಶನದ ವೇಳೆ ತಾಂತ್ರಿಕ ತೊಂದರೆ ಕಾಣಿಸಿಕೊಂಡಿತು.

ಇದರಿಂದ ರೊಚ್ಚಿಗೆದ್ದ ಪ್ರೇಕ್ಷಕರು ದಾಂಧಲೆ ನಡೆಸಿದರು. ದಾಂಧಲೆಯಲ್ಲಿ 3 ಕ್ಕೂ ಹೆಚ್ಚು ಮಂದಿ ಗಾಯಗಂಡಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು 10 ಜನ ದಾಂಧಲೆ ಕೋರರನ್ನು ಬಂಧಿಸಿ ಶಕ್ಕೆ ತೆಗೆದುಕೊಂಡಿದ್ದಾರೆ.

ಮುಂಗಾರು ಮಳೆ ಶತದಿನ ದಾಟಿ ಮುನ್ನುಗ್ಗುತ್ತಿರುವಂತಯೇ ಹುಡುಗಾಟದ ಬಗ್ಗೆಯೂ ವ್ಯಾಪಕ ನಿರೀಕ್ಷೆ ಇರಿಸಲಾಗಿತ್ತು. ಗಣೇಶ್ ಅಭಿಮಾನಿಗಳೂ ಹೊಸ ನಿರೀಕ್ಷೆಯೊಂದಿಗೆ ಚಿತ್ರ ಮಂದಿರಕ್ಕೆ ಆಗಮಿಸಿದ್ದರು. ಆದರೆ ಈ ಘಟನೆಯಿಂದ ತೀವ್ರ ನಿರಾಸೆ ಅನುಭವಿಸುವಂತಾಯಿತು

ವೆಬ್ದುನಿಯಾವನ್ನು ಓದಿ