ಶನಿವಾರದಿಂದ ಬ್ಯಾಂಗ್ಲೂರ್ ಬೆಂಗಳೂರು ಆಗಿ, ಬೆಳಗಾಂ ಅನ್ನು ಬೆಳಗಾವಿ ಎಂದು, ಮೈಸೂರ್ಅನ್ನು ಮೈಸೂರು ಎಂದು ಕರೆಯಲಾಗುತ್ತದೆ. ರಾಜ್ಯವು 59ನೇ ಕನ್ನಡ ರಾಜ್ಯೋತ್ಸವ ಸಮಾರಂಭ ಆಚರಿಸುತ್ತಿರುವ ಸಂದರ್ಭದಲ್ಲಿ ಕರ್ನಾಟಕದ 12 ನಗರಗಳನ್ನು ಹೊಸ ಹೆಸರುಗಳಿಂದ ಕರೆಯಲಾಗುತ್ತದೆ. ಶುಕ್ರವಾರ 12 ನಗರಗಳಿಗೆ ಮರುನಾಮಕರಣ ಮಾಡುವ ಅಧಿಸೂಚನೆ ಹೊರಡಿಸಲಾಗುತ್ತದೆ.
ಅಧಿಸೂಚನೆ ಹೊರಡಿಸಿದ ಬಳಿಕ 12 ನಗರಗಳಿಗೆ ಮರುನಾಮಕರಣ ಮಾಡಲಾಗುತ್ತದೆ.
ಬ್ಯಾಂಗಳೂರ್-ಬೆಂಗಳೂರು, ಮ್ಯಾಂಗ್ಲೂರ್-ಮಂಗಳೂರು, ಬೆಳ್ಳಾರಿ-ಬಳ್ಳಾರಿ, ಬಿಜಾಪುರ-ವಿಜಯಪುರ ಅಥವಾ ವಿಜಾಪುರ, ಬೆಳಗಾಂ-ಬೆಳಗಾವಿ, ಚಿಕ್ಕಮಗಳೂರ್-ಚಿಕ್ಕಮಗಳೂರು, ಗುಲ್ಬರ್ಗ-ಕಲಬುರಗಿ, ಮೈಸೂರ್-ಮೈಸೂರು, ಹೊಸಪೇಟ್-ಹೊಸಪೇಟೆ, ಶಿಮೊಗ್ಗಾ-ಶಿವಮೊಗ್ಗಾ, ಹುಬ್ಳಿ-ಹುಬ್ಬಳ್ಳಿ, ತುಮಕೂರ್-ತುಮಕೂರು ಹೆಸರುಗಳಲ್ಲಿ ಮರುನಾಮಕರಣ ಮಾಡಲಾಗುತ್ತದೆ.