16 ಸಾವಿರ ಉಪನ್ಯಾಸಕರ ಬಾಕಿ ಸಂಬಳ ಬಿಡುಗಡೆ

ಗುರುವಾರ, 21 ನವೆಂಬರ್ 2013 (18:02 IST)
PR
PR
ಬೆಂಗಳೂರು: 16 ಸಾವಿರ ಅತಿಥಿ ಉಪನ್ಯಾಸಕರ ಬಾಕಿ ಸಂಬಳ ಬಿಡುಗಡೆಗೆ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಸಂಪುಟ ಸಭೆ ಬಳಿಕ ಸಚಿವ ಕಾನೂನು ಸಚಿವ ಜಯಚಂದ್ರ ಈ ವಿಷಯವನ್ನು ಸ್ಪಷ್ಟಪಡಿಸಿದರು. ಸಂಬಳಕ್ಕಾಗಿ ಬಾಕಿ 61 ಕೋಟಿ ರೂ. ಬಿಡುಗಡೆಗೆ ಒಪ್ಪಿಗೆ ನೀಡಲಾಯಿತು.ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಲು ಸಂಪುಟ ಸಭೆ ನಿರ್ಧರಿಸಿತು. ಮರಳುವಹಿವಾಟು ಸಂಬಂಧ ಕಾನೂನು ರೂಪಿಸುವುದಾಗಿ ತಿಳಿಸಿದೆ. ಹಿಂದುಳಿದ ವರ್ಗಗಳಿಗೆ 60 ವಿದ್ಯಾರ್ಥಿನಿಲಯಗಳ ಸ್ಥಾಪನೆ, ಜಾತಿವಾರು ಜನಗಣತಿ ಕೈಗೊಳ್ಳುವುದು ಸೇರಿದೆ.

ಶಿರಾ ತಾಲೂಕಿನಲ್ಲಿ ಆಧುನಿಕ ಕಸಾಯಿಖಾನೆ ನಿರ್ಮಾಣಕ್ಕೆ ಕೂಡ ನಿರ್ಧರಿಸಲಾಗಿದೆ. ಪೊಲೀಸ್ ನೇಮಕಾತಿ ನಿಯಮ ತಿದ್ದುಪಡಿಗೆ, ಮರಳು ನೀತಿ ತಿದ್ದುಪಡಿಗೆ ಕೂಡ ಸಂಪುಟ ಒಪ್ಪಿಗೆ ನೀಡಿದೆ

ವೆಬ್ದುನಿಯಾವನ್ನು ಓದಿ