ತರೀಕೆರೆಯ ಕೆನರಾ ಬ್ಯಾಂಕ್ನ ಆವರಣದಲ್ಲಿ ಮಲ್ಲಪ್ಪ ಎಂಬ ಅಮೃತಾಪುರದ ರೈತ ಬ್ಯಾಂಕಿನಿಂದ 2 ಲಕ್ಷ ರೂ. ಬೆಳೆ ಸಾಲ ಪಡೆದು ಹಣ ಎಣಿಕೆ ಮಾಡುತ್ತಿದ್ದಾಗ ಇಬ್ಬರು ಆಗಂತುಕರು 85 ಸಾವಿರ ರೂ. ಲಪಟಾಯಿಸಿದ ಘಟನೆ ನಡೆದಿದೆ. ಮಲ್ಲಪ್ಪ ಎಂಬವರು ಬ್ಯಾಂಕ್ ಆವರಣದಲ್ಲಿ ಹಣ ಎಣಿಕೆಮಾಡುವಾಗ ಆಗಂತುಕರೊಬ್ಬರು ಬಂದು ಹಣ ಎಣಿಕೆಗೆ ಸಹಾಯಮಾಡುವುದಾಗಿ ಹೇಳಿ ಅವರು ಕೂಡ ಸ್ವಲ್ಪ ಹಣ ಪಡೆದು ಎಣಿಕೆಮಾಡತೊಡಗಿದರು.
ಅಷ್ಟರಲ್ಲಿ ಇನ್ನೊಬ್ಬ ಆಗಂತುಕ ಮಲ್ಲಪ್ಪ ಅವರ ಗಮನ ಬೇರೆಡೆಗೆ ಸೆಳೆದಾಗ ಒಂದಷ್ಟು ಹಣವನ್ನು ಮೊದಲ ಆಗಂತುಕ ಜೇಬಿಗಿಳಿಸಿದ್ದ. ಹಣ ಲಪಾಟಿಯಿಸುತ್ತಿರುವ ದೃಶ್ಯ ಬ್ಯಾಂಕಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.