ರೈತನಿಂದ 85 ಸಾವಿರ ಲಪಟಾಯಿಸಿದ ಇಬ್ಬರು ಖದೀಮರು

ಗುರುವಾರ, 18 ಸೆಪ್ಟಂಬರ್ 2014 (11:32 IST)
ತರೀಕೆರೆಯ ಕೆನರಾ ಬ್ಯಾಂಕ್‌ನ ಆವರಣದಲ್ಲಿ ಮಲ್ಲಪ್ಪ ಎಂಬ ಅಮೃತಾಪುರದ ರೈತ  ಬ್ಯಾಂಕಿನಿಂದ 2 ಲಕ್ಷ ರೂ. ಬೆಳೆ ಸಾಲ ಪಡೆದು ಹಣ ಎಣಿಕೆ ಮಾಡುತ್ತಿದ್ದಾಗ ಇಬ್ಬರು ಆಗಂತುಕರು 85 ಸಾವಿರ ರೂ. ಲಪಟಾಯಿಸಿದ ಘಟನೆ ನಡೆದಿದೆ.   ಮಲ್ಲಪ್ಪ ಎಂಬವರು ಬ್ಯಾಂಕ್ ಆವರಣದಲ್ಲಿ ಹಣ ಎಣಿಕೆಮಾಡುವಾಗ ಆಗಂತುಕರೊಬ್ಬರು ಬಂದು ಹಣ ಎಣಿಕೆಗೆ ಸಹಾಯಮಾಡುವುದಾಗಿ ಹೇಳಿ ಅವರು ಕೂಡ ಸ್ವಲ್ಪ ಹಣ ಪಡೆದು ಎಣಿಕೆಮಾಡತೊಡಗಿದರು.

ಅಷ್ಟರಲ್ಲಿ ಇನ್ನೊಬ್ಬ ಆಗಂತುಕ ಮಲ್ಲಪ್ಪ ಅವರ ಗಮನ ಬೇರೆಡೆಗೆ ಸೆಳೆದಾಗ ಒಂದಷ್ಟು ಹಣವನ್ನು ಮೊದಲ ಆಗಂತುಕ ಜೇಬಿಗಿಳಿಸಿದ್ದ. ಹಣ ಲಪಾಟಿಯಿಸುತ್ತಿರುವ ದೃಶ್ಯ ಬ್ಯಾಂಕಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.

ಮಲ್ಲಪ್ಪ  ಮನೆಗೆ ಹೋಗಿ ಹಣವನ್ನು ಎಣಿಕೆ ಮಾಡಿದಾಗ 85 ಸಾವಿರ ರೂ. ಕಡಿಮೆಯಿರುವ ಸಂಗತಿ ಬೆಳಕಿಗೆ ಬಂದಿದೆ. ಕೂಡಲೇ ಬ್ಯಾಂಕಿಗೆ ವಿಷಯ ತಿಳಿಸಿದಾಗ ಸಿಸಿಟಿವಿ ಕ್ಯಾಮೆರಾದಲ್ಲಿ ಪರೀಕ್ಷೆ ಮಾಡಿದಾಗ ಹಣ ಲಪಟಾಯಿಸಿದ ವಿಷಯ ಗೊತ್ತಾಗಿ ಮಲ್ಲಪ್ಪ ಪೊಲೀಸರಿಗೆ ದೂರು ನೀಡಿದ್ದಾರೆ. 
 

ವೆಬ್ದುನಿಯಾವನ್ನು ಓದಿ