ಶಿಥಿಲಾವಸ್ಥೆಯಲ್ಲಿದ್ದ ಮೂರು ಅಂತಸ್ತಿನ ಕಟ್ಟಡ ಬಿರುಕು ಬಿಟ್ಟಿದ್ದು, ಪಕ್ಕದಲ್ಲಿದ್ದ 2 ಅಂತಸ್ತಿನ ಕಟ್ಟಡದ ಮೇಲೆ ಮೂರು ಅಂತಸ್ತಿನ ಕಟ್ಟಡ ಕುಸಿದು ವಾಲಿಕೊಂಡಿರುವ ಘಟನೆ ಬಸವೇಶ್ವರನಗರದ ಶಂಕರಮಠದ ಬಳಿ ಸಂಭವಿಸಿದೆ. ಈ ಕಟ್ಟಡ ಮನೋರಮಾ ಎಂಬವರಿಗೆ ಸೇರಿದ್ದು ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆಗೆ ಇಳಿದಿದ್ದಾರೆ.