ಕೆರೆಯಲ್ಲಿ ಬಟ್ಟೆ ತೊಳೆಯಲು ಹೋದ ಮೂವರ ದಾರುಣ ಸಾವು

ಸೋಮವಾರ, 29 ಸೆಪ್ಟಂಬರ್ 2014 (16:12 IST)
ತುಮಕೂರಿನ ತುರುವೇಕೆರೆಯ ಜಾಲಹಳ್ಳಿ ಬಳಿ ಕೆರೆಯಲ್ಲಿ ಬಟ್ಟೆಒಗೆಯಲು ಹೋಗಿದ್ದಾಗ ಕೆರೆಯಲ್ಲಿ ಮುಳುಗಿ ಮೂವರು ದಾರುಣವಾಗಿ ಮೃತಪಟ್ಟಿದ್ದಾರೆ. 14 ವರ್ಷ ವಯಸ್ಸಿನ ಬಾಲಕ ವೆಂಕಟೇಶ್, ರಮ್ಯಾ ಮತ್ತು  ತಾಯಿ ಮಂಜಮ್ಮ ಅವರು ನೀರುಪಾಲಾಗಿದ್ದಾರೆ.

ವೆಂಕಟೇಶ್ ಅವರ ಶವ ಪತ್ತೆಯಾಗಿದ್ದು, ಇನ್ನಿಬ್ಬರ ಶವ ಪತ್ತೆಯಾಗಿಲ್ಲ. ವೆಂಕಟೇಶ್ ನೀರಿಗಿಳಿದಿದ್ದಾಗ ಮುಳುಗಲಾರಂಭಿಸಿದಾಗ ಅವನ ತಾಯಿ ಮಂಜಮ್ಮ ಅವನನ್ನು ರಕ್ಷಿಸಲು ಪ್ರಯತ್ನಿಸಿ ಅವರು ಕೂಡ ಮುಳುಗಿದರು. ಆಗ ರಮ್ಯಾ ಕೂಡ ಅವರ ರಕ್ಷಣೆಗೆ ಧಾವಿಸಿ ಸಾವಿನ ದವಡೆಗೆ ಗುರಿಯಾಗಿದ್ದಾರೆ. 

ವೆಬ್ದುನಿಯಾವನ್ನು ಓದಿ