ಸಾಲಬಾಧೆ: ಆತ್ಮಹತ್ಯೆಗೆ ಶರಣಾದ ನಾಲ್ವರ ಕುಟುಂಬ

ಮಂಗಳವಾರ, 21 ಅಕ್ಟೋಬರ್ 2014 (10:55 IST)
ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ಸಂಭವಿಸಿದೆ. ಪತ್ನಿ ಮತ್ತು ಇಬ್ಬರು ಮಕ್ಕಳಿಗೆ ವಿಷವುಣಿಸಿ ಪತಿ ನೇಣಿಗೆ ಶರಣಾದ ಘಟನೆ ಆನೇಕಲ್‌ನ ಬನ್ನಹಳ್ಳಿಯಲ್ಲಿ ಸಂಭವಿಸಿದೆ. ಪತ್ನಿ ಪಾರ್ವತಿ(28) ಮಕ್ಕಳಾದ ಸುಧಾ(11) ಕಾವ್ಯ(5) ಶಿವರಾಜ್ (38) ಆತ್ಮಹತ್ಯೆಗೆ ಶರಣಾದವರು.

ತೀವ್ರ ಸಾಲ ಮಾಡಿಕೊಂಡಿದ್ದರಿಂದ ಸಾಲ ತೀರಿಸಲಾಗದೇ ಶಿವರಾಜ್  ಖಿನ್ನತೆಗೆ ಒಳಗಾಗಿದ್ದರು. ಸಾಲಬಾಧೆಯಿಂದ ತಪ್ಪಿಸಿಕೊಳ್ಳಲು ಇಡೀ ಕುಟುಂಬದ ಆತ್ಮಹತ್ಯೆಯೇ ಪರಿಹಾರವೆಂದು ಭಾವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

 ಸಾಲಗಾರರು ಕೂಡ ಆಗಾಗ್ಗೆ ಹಣವನ್ನು ಹಿಂತಿರುಗಿಸುವಂತೆ ಕಿರುಕುಳ ನೀಡುತ್ತಿದ್ದರು. ಇದರಿಂದ ಶಿವರಾಜ್ ತೀವ್ರ ಬೇಸತ್ತು ಖಿನ್ನತೆಗೆ ಒಳಪಟ್ಟು ಪತಿ, ಮಕ್ಕಳಿಗೆ ವಿಷವುಣಿಸಿ ಆತ್ಮಹತ್ಯೆಗೆ ಶರಣಾದರು.   ಹೆಬ್ಬಗೋಡಿ ಠಾಣಾ ಪೊಲೀಸರು ಭೇಟಿ ನೀಡಿ ತನಿಖೆ ನಡೆಸಿದ್ದಾರೆ.

ವೆಬ್ದುನಿಯಾವನ್ನು ಓದಿ