ಸೋಮೇಶ್ವರ ಕಡಲ ಕಿನಾರೆಯಲ್ಲಿ ಈಜಲು ತೆರಳಿದ್ದ ನಾಲ್ವರು ಸಮುದ್ರಪಾಲು

ಭಾನುವಾರ, 14 ಫೆಬ್ರವರಿ 2016 (18:04 IST)
ಹಾಸನ ಮೂಲದ 6 ಮಂದಿ ಸೋಮೇಶ್ವರ ಕಡಲ ಕಿನಾರೆಯಲ್ಲಿ ಈಜಲು ತೆರಳಿದ್ದಾಗ ನಾಲ್ವರು ಸಮುದ್ರಪಾಲಾಗಿರುವ ದುರಂತ ಸಂಭವಿಸಿದೆ. 6 ಸ್ನೇಹಿತರು ಮೂರು ಬೈಕ್‌‌ಗಳಲ್ಲಿ ದರ್ಗಾಕ್ಕೆ ಬಂದಿದ್ದರು.

ದರ್ಗಾಕ್ಕೆ ತೆರಳುವ ಮೊದಲು ನಾಲ್ವರು ಸ್ನೇಹಿತರು ಸಮದ್ರಕ್ಕೆ ಈಜಲು ತೆರಳಿದ್ದರು. ಆದರೆ ಸಮುದ್ರದ ಅಲೆಗಳ ಹೊಡೆತಕ್ಕೆ ಸಿಕ್ಕಿ ನೀರುಪಾಲಾಗಿ ದುರಂತ ಸಾವನ್ನಪ್ಪಿದ್ದಾರೆ. ಜೀವರಕ್ಷಕ ಸಿಬ್ಬಂದಿ ಇಬ್ಬರನ್ನು ರಕ್ಷಣೆ ಮಾಡಿದ್ದಾರೆ.  

ಉಳ್ಳಾಲದ ಜೀವರಕ್ಷಕ ಸಿಬ್ಬಂದಿ ಮೃತರ ಶವಗಳಿಗಾಗಿ ಶೋಧ ನಡೆಸಿದ್ದಾರೆ. ಉಳ್ಳಾಲ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಮ್ರಾನ್ ಪಾಷಾ, ಷಾಹೀದ್ ಖಲೀಂ, ಹನೀಫ್ ಮತ್ತು ಮಹಮ್ಮದ್ ಸುಹೇದ್ ಮೃತರಾದವರು. 

ವೆಬ್ದುನಿಯಾವನ್ನು ಓದಿ