ಟ್ರಾಕ್ಟರ್‌ಗೆ ವಿದ್ಯುತ್ ತಂತಿ ತಗುಲಿ 5 ಸಾವು

ಭಾನುವಾರ, 14 ಸೆಪ್ಟಂಬರ್ 2014 (09:21 IST)
ಗಣಪತಿ ವಿಸರ್ಜನೆ ಮುಗಿಸಿ ಟ್ರಾಕ್ಟರ್‌ನಲ್ಲಿ ಮರಳುತ್ತಿದ್ದ ವೇಳೆ ವಿದ್ಯುತ್ ತಂತಿ ಸ್ಪರ್ಶವಾಗಿ 5 ಮಂದಿ ಯುವಕರು ದುರ್ಮರಣವನ್ನಪ್ಪಿ ಹಲವರು ಗಾಯಗೊಂಡ ಘಟನೆ  ದೊಡ್ಡಬಳ್ಳಾಪುರದ ಚಿಕ್ಕ ಮಧುರೆ ಗ್ರಾಮದಲ್ಲಿ ನಡೆದಿದೆ.

ಮೃತಪಟ್ಟವರನ್ನು  ನಾಗೇಶ್, ದರ್ಶನ್, ಅಂಜನ್, ಪವನ್, ಅರುಣ್ ಎಂದು ಗುರುತಿಸಲಾಗಿದ್ದು, ಅವರೆಲ್ಲೂ 20 ರಿಂದ 25 ವರ್ಷದ ಒಳಗಿನವರಾಗಿದ್ದಾರೆ.
 
ಕಳೆದ ರಾತ್ರಿ 1 ಗಂಟೆ ಸುಮಾರಿಗೆ ಗಣೇಶ ವಿಸರ್ಜನೆ ಮುಗಿಸಿ ಹಿಂತಿಗುತ್ತಿದ್ದಾಗ ಈ ಘಟನೆ ನಡೆದಿದ್ದು ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. 
 
ದೊಡ್ಡ ಬೆಳವಂಗಲ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೋಲಿಸರು ತನಿಖೆ ನಡೆಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ