ಈಜಲು ಹೋದ ಐವರು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಸಾವು

ಗುರುವಾರ, 23 ಏಪ್ರಿಲ್ 2015 (18:50 IST)
ಈಜಲು ತೆರಳಿದ್ದ ನಗರದ ಐವರು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆ ನಗರದ ಉತ್ತರ ತಾಲೂಕಿನ ಚೆನ್ನಹಳ್ಳಿ ಗ್ರಾಮದ ಬೆಟ್ಟಹಲಸೂರಿನ ಬಂಡೆಹೊಂಡದಲ್ಲಿ ನಡೆದಿದೆ. 
 
ಸಾವನ್ನಪ್ಪಿದ ವಿದ್ಯಾರ್ಥಿಗಳ ಬಗ್ಗೆ ಸಂಪೂರ್ಣ ಮಾಹಿತಿ ಲಭ್ಯವಾಗಿಲ್ಲವಾದರೂ ನಗರದ ರೇವಣಸಿದ್ದೇಶ್ವರ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ.  
 
ಕಾಲೇಜಿನ ಬಿಡುವಿನ ಸಮಯವನ್ನು ಕಳೆಯಲು 8 ಮಂದಿ ಇದ್ದ ತಂಡವೊಂಡು ಈ ಹೊಂಡದ ಬಳಿ ಬಂದಿತ್ತು. ಅಲ್ಲದೆ ಎಲ್ಲರೂ ಒಟ್ಟಾಗಿ ಈಜುವ ನಿರ್ಧಾರವನ್ನು ಮಾಡಿದ್ದರು ಎನ್ನಲಾಗಿದ್ದು, ಹೊಂಡದ ಮೇಲಿನಿಂದ ನೀರಿಗೆ ಧುಮುಕಿದ್ದಾರೆ. ಹೊಂಡದ ತಳದಲ್ಲಿ ಕಲ್ಲುಗಳಿದ್ದ ಪರಿಣಾಮ ಮೊದಲು ಧುಮುಕಿದ ಐವರು ವಿದ್ಯಾರ್ಥಿಗಳು ನೀರಿನಿಂದ ಮೇಲೇಳಲಿಲ್ಲ. ಆದರೆ ಇತರೆ ಮೂವರು ವಿದ್ಯಾರ್ಥಿಗಳು ಬದುಕುಳಿದಿದ್ದಾರೆ ಎನ್ನಲಾಗಿದೆ.  
 
ತಾಲೂಕಿನ ಚಿಕ್ಕಜಾಲ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ