6 ಐಎಎಸ್ ಅಧಿಕಾರಿಗಳ ರಕ್ಷಣೆಗೆ ಸರ್ಕಾರ ಹೊರಟಿದೆ: ಹಿರೇಮಠ್ ಆರೋಪ

ಶನಿವಾರ, 15 ಫೆಬ್ರವರಿ 2014 (14:21 IST)
PR
PR
ಬೆಂಗಳೂರು: ಅಕ್ರಮ ಗಣಿಗಾರಿಕೆ ಬಗ್ಗೆ , ಲೋಕಾಯುಕ್ತ ವರದಿ ಬಗ್ಗೆ ಸರ್ಕಾರ ಕ್ರಮ ಕೈಗೊಂಡಿಲ್ಲ ಎಂದು ಸಮಾಜಪರಿವರ್ತನೆ ಸಂಘಟನೆ ಅಧ್ಯಕ್ಷ ಎಸ್.ಆರ್. ಹಿರೇಮಠ್ ಬೆಂಗಳೂರಿನಲ್ಲಿ ಆರೋಪಿಸಿದರು. 6 ಐಎಎಸ್‌ ಅಧಿಕಾರಿಗಳ ವಿರುದ್ದ ಲೋಕಾಯುಕ್ತ ವರದಿ ಬಂದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಶಿವಲಿಂಗ ಮೂರ್ತಿ, ಉಮೇಶ್ ಮಹೇಂದ್ರ ಜೈನ್, ಪೆರುಮಾಳ್ ಸೇರಿ 6 ಅಧಿಕಾರಿಗಳ ರಕ್ಷಣೆಗೆ ಸರ್ಕಾರ ಹೊರಟಿದೆ ಎಂದು ಹಿರೇಮಠ್ ಹೇಳಿದರು. ರಿಲಯನ್ಸ್ ವಿರುದ್ಧ ಭ್ರಷ್ಟಾಚಾರ ಆರೋಪ ಕುರಿತು ವೀರಪ್ಪ ಮೊಯ್ಲಿ ವಿರುದ್ಧ ಕೂಡ ಹಿರೇಮಠ್ ವಾಗ್ದಾಳಿ ಮಾಡಿದರು.

ಜೈಪಾಲ್ ರೆಡ್ಡಿ ಉತ್ತಮ ಸಚಿವರಾಗಿದ್ದರು. ರಿಲಯನ್ಸ್ ಕಂಪನಿಯನ್ನು ಹತ್ತಿರ ಬಿಟ್ಟುಕೊಂಡಿರಲಿಲ್ಲ ಎಂದು ಹಿರೇಮಠ್ ಹೇಳಿದರು.

ವೆಬ್ದುನಿಯಾವನ್ನು ಓದಿ