75 ವೃದ್ಧೆಯನ್ನು ಅಪಹರಿಸಿದ ಯುವಕರಿಬ್ಬರು, ಆಕೆಯನ್ನು ಭೀಕರವಾಗಿ ಹತ್ಯೆ ಮಾಡಿದ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ.
ಹಣಕಾಸಿನ ಸಂಬಂಧ ಈ ದುಷ್ಕೃತ್ಯ ನಡೆದಿದೆ ಎಂದು ಶಂಕಿಸಲಾಗಿದ್ದು ಆರೋಪಿಗಳಾದ ಶ್ರೀಧರ್ ( 25) ಮತ್ತು ಬಸವರಾಜ್( 26) ಅವರನ್ನು ಬಂಧಿಸಲಾಗಿದೆ.
ನಿವೃತ್ತ ಶಿಕ್ಷಣ ಸಂಯೋಜಕಿ ಆಗಿದ್ದ ರಾಣೆಬೆನ್ನೂರಿನ ವಿನಾಯಕ ನಗರದ ನಿವಾಸಿ ಲೀಲಾವತಿಯವರನ್ನು ಅಕ್ಟೋಬರ್ 16 ರಂದು ಅಪಹರಿಸಿದ್ದ ಆರೋಪಿಗಳು, ಅಮಾನುಷವಾಗಿ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ರಾಣೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.