75 ವರ್ಷದ ವೃದ್ಧೆಯನ್ನು ಅಪಹರಿಸಿ ಹತ್ಯೆ

ಶನಿವಾರ, 18 ಅಕ್ಟೋಬರ್ 2014 (11:56 IST)
75  ವೃದ್ಧೆಯನ್ನು ಅಪಹರಿಸಿದ ಯುವಕರಿಬ್ಬರು, ಆಕೆಯನ್ನು ಭೀಕರವಾಗಿ ಹತ್ಯೆ ಮಾಡಿದ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ.

ಹಣಕಾಸಿನ ಸಂಬಂಧ ಈ ದುಷ್ಕೃತ್ಯ ನಡೆದಿದೆ ಎಂದು ಶಂಕಿಸಲಾಗಿದ್ದು ಆರೋಪಿಗಳಾದ ಶ್ರೀಧರ್ ( 25) ಮತ್ತು ಬಸವರಾಜ್( 26) ಅವರನ್ನು ಬಂಧಿಸಲಾಗಿದೆ.
 
ನಿವೃತ್ತ ಶಿಕ್ಷಣ ಸಂಯೋಜಕಿ ಆಗಿದ್ದ ರಾಣೆಬೆನ್ನೂರಿನ ವಿನಾಯಕ ನಗರದ ನಿವಾಸಿ ಲೀಲಾವತಿಯವರನ್ನು ಅಕ್ಟೋಬರ್ 16 ರಂದು ಅಪಹರಿಸಿದ್ದ ಆರೋಪಿಗಳು, ಅಮಾನುಷವಾಗಿ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ರಾಣೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೆಬ್ದುನಿಯಾವನ್ನು ಓದಿ