ಬಾಲಕನನ್ನು ಥಳಿಸಿದ ಆ್ಯಂಡ್ರ್ಯೂ ಡಿಕೋಸ್ತಾ, ವಿಟ್ಲದ ಪೆರುವಾಯಿಯ ಫಾತಿಮಾ ಮಾತೆ ಚರ್ಚ್ ಫಾದರ್ ಆಗಿದ್ದಾರೆ. ಬೇಸಿಗೆ ರಜೆ ಸಂದರ್ಭದಲ್ಲಿ ಚರ್ಚ್ನಲ್ಲಿ ನಡೆಯುವ ಪ್ರಾರ್ಥನಾ ತರಬೇತಿ ಶಿಬಿರಕ್ಕೆ ಬಂದಿದ್ದ ಬಾಲಕನಿಗೆ ಫಾದರ್ ಪ್ರಾರ್ಥನೆ ಹೇಳುವಂತೆ ಆದೇಶಿಸಿದ್ದಾರೆ. ಆದರೆ ಆತ ತನಗೆ ಬರುವುದಿಲ್ಲವೆಂದಿದ್ದಾರೆ. ಇದರಿಂದ ಕೋಪಗೊಂಡ ಅವರು 8ವರ್ಷದ ಬಾಲಕ ಸುನೀಲ್ನನ್ನು ತಮ್ಮ ಕೋಣೆಗೆ ಕರೆದೊಯ್ದು ಮನಬಂದಂತೆ ಥಳಿಸಿದ್ದಾರೆ ಮತ್ತು ಈ ವಿಷಯವನ್ನು ಯಾರ ಬಳಿಯಾದರೂ ಬಾಯ್ಬಿಟ್ಟರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಬಾಲಕ ಮತ್ತು ಆತನ ಪೋಷಕರಿಗೆ ಬೆದರಿಕೆ ಒಡ್ಡಿದ್ದಾರೆ.