81ನೇ ಸಾಹಿತ್ಯ ಸಮ್ಮೇಳನ: ಶ್ರವಣಬೆಳಗೊಳದಲ್ಲಿ ಮನೆ ಮಾಡಿದ ರಂಗು

ಶನಿವಾರ, 31 ಜನವರಿ 2015 (17:37 IST)
81ನೇ ಕನ್ನಡ ಸಾಹಿತ್ಯ ಸಮ್ಮೇಳನ ನಾಳೆಯಿಂದ ಆರಂಭವಾಗಲಿದ್ದು, ಸಮ್ಮೇಳನದ ಅಧ್ಯಕ್ಷ ಡಾ.ಸಿದ್ದಲಿಂಗಯ್ಯನವರನ್ನು ಉಸ್ತುವಾರಿ ಸಚಿವ ಹೆಚ್.ಎಸ್.ಮಹಾದೇವ ಪ್ರಸಾದ್ ಅವರು ಇಂದು ಅದ್ದೂರಿಯಾಗಿ ಸ್ವಾಗತಿಸಿದರು. 
 
ಶ್ರವಣಬೆಳಗೊಳದಲ್ಲಿ ಇದೇ ಮೊದಲ ಬಾರಿಗೆ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು, ಅಧ್ಯಕ್ಷ ಡಾ. ಸಿದ್ದಲಿಂಗಯ್ಯನವರು ಈಗಾಗಲೇ ಸ್ಥಳಕ್ಕೆ ಆಗಮಿಸಿದ್ದಾರೆ. ಆಗಮಿಸಿದ ಅಧ್ಯಕ್ಷರನ್ನು ವರ್ಣರಂಜಿತ ಎತ್ತಿನ ಗಾಡಿಯಲ್ಲಿ ಮೆರವಣಿಗೆ ಕರೆದುಕೊಂಡು ಹೋಗುವ ಮೂಲಕ ಸಚಿವ ಹೆಚ್.ಎಸ್.ಮಹಾದೇವ ಪ್ರಸಾದ್ ಗೌರವ ವಂದನೆ ತೋರಿದರು.
 
ಅಧ್ಯಕ್ಷರ ಈ ಸ್ವಾಗತ ಕಾರ್ಯಕ್ರಮಕ್ಕೆ 11 ಕಲಾ ತಂಡಗಳು ಭಾಗವಹಿಸಿ ಮೆರವಣಿಗೆಗೆ ಜೀವ ತುಂಬಿದವು. ಇನ್ನು ಸಮ್ಮೇಳನ ಆರಂಭವಾಗುವ ಮುನ್ನವೇ ಸಾಕಷ್ಟು ಸಾಹಿತ್ಯ ಪ್ರೇಮಿಗಳು ಆಗಮಿಸುವ ಮೂಲಕ ಅಧ್ಯಕ್ಷರ ಮೆರವಣಿಗೆಯಲ್ಲಿ ಭಾಗಿಯಾಗಿ ಸಂಭ್ರಮವನ್ನು ಕಣ್ತುಂಬಿಕೊಂಡರು. 

ವೆಬ್ದುನಿಯಾವನ್ನು ಓದಿ