ಏನಿದು ಪ್ರಕರಣ?:
ನಗರದ ಬಿಲ್ಡ್ರ್ ಶ್ರೀನಿವಾಸ್ ಮೂರ್ತಿ ಎಂಬುವವರು ಅಪಾರ್ಟ್ಮೆಂಟ್ ನಿರ್ಮಿಸಿಕೊಡುವುದಾಗಿ ಹೇಳಿ ಗ್ರಾಹಕರಿಂದ 8ರಿಂದ 10 ಲಕ್ಷದ ವರೆಗೆ ಹಣ ಪಡೆದಿದ್ದರು. ಹೀಗೆ ಸುಮಾರು 7.5 ಕೋಟಿ ಹಣವನ್ನು ಸಂಗ್ರಹಿಸಿದ್ದರು. ಆದರೆ ಕಳೆದ ಒಂದು ವರ್ಷದಿಂದ ಅಪಾರ್ಟ್ಮೆಂಟ್ ಕಾಮಗಾರಿ ಕಾರ್ಯ ಸ್ಥಗಿತಗೊಳಿಸಲಾಗಿತ್ತು. ಇದರಿಂದ ಆತಂಕಗೊಂಡ ಗ್ರಾಹಕರು, ಬಿಲ್ಡರ್ನ್ನು ಶೋಧಿಸಿದ್ದಾರೆ. ಆದರೆ ಅವರು ಗ್ರಾಹಕರಿಗೆ ಸಿಗುತ್ತಿಲ್ಲ. ಈ ಕಾರಣದಿಂದ ಭಯಭೀತರಾದ ಗ್ರಾಹಕರು ಪ್ರಸ್ತುತ ಕೋರ್ಟ್ ಮೆಟ್ಟಿಲೇರಿದ್ದು, ಬಿಲ್ಡರ್ ವಿರುದ್ಧ ದೂರು ದಾಖಲಿಸಿದ್ದಾರೆ.
ಇನ್ನು ಬಿಲ್ಡರ್ ಅಪಾರ್ಟ್ಮೆಂಟ್ ನಿರ್ಮಾಣ ಜಾಗವನ್ನೂ ಕೂಡ ಒಪ್ಪಂದದ ಮೇರೆ ಬಾಡಿಗೆ ಪಡೆದಿದ್ದ ಜಾಗವಾಗಿತ್ತು ಎನ್ನಲಾಗಿದ್ದು, ಪ್ರಸ್ತುತ ಬಿಲ್ಡರ್ ತಲೆ ಮರೆಸಿಕೊಂಡಿದ್ದಾರೆ. ಸುಮಾರು 150ಕ್ಕೂ ಹೆಚ್ಚು ಗ್ರಾಹಕರು ಹಣ ನೀಡಿ ಮೋಸಕ್ಕೊಳಗಾಗಿದ್ದಾರೆ.