ಪ್ರಕರಣದ ವಿವರ: ಪ್ರತಿನಿತ್ಯ ಪಾನಮತ್ತನಾಗಿ ಬರುತ್ತಿದ್ದ ಚನ್ನಪ್ಪ ಜೋಡಿಗೇರಿ, ತನ್ನ ಹೆಂತಿಯನ್ನು ದೈಹಿಕ ಹಾಗೂ ಮಾನಸಿಕವಾಗಿ ಹಿಂಸಿಸುವ ಮೂಲಕ ತನ್ನ ಪ್ರತಾಪ ತೋರುತ್ತಿದ್ದ. ಇದರಿಂದ ಬೇಸತ್ತಿದ್ದ ಪತ್ನಿ ಕೆಲ ದಿನಗಳ ಹಿಂದೆ ಮನೆ ಬಿಟ್ಟು ತೆರಳಿದ್ದಳು. ಆದರೆ ಇದು ಮತ್ತೆ ಬಂದಿದ್ದಳು ಎನ್ನಲಾಗಿದ್ದು, ಈ ವಿಷಯವನ್ನು ಮಗ ಈರಪ್ಪ ತನ್ನ ತಂದೆ ಜೋಡಿಗೇರಿಗೆ ತಿಳಿಸಿದ್ದಾನೆ. ಇದರಿಂದ ಕುಪಿತಗೊಂಡ ಪಾಪಿ ಜೋಡಿಗೇರಿ ತನ್ನ ಒಂದೂವರೆ ವರ್ಷದ ಮಗಳು ಹಾಗೂ ಮಗ ಈರಪ್ಪ ಇಬ್ಬರನ್ನೂ ಕೂಡ ಬಾವಿಯೊಂದರ ಬಳಿ ಕರೆತಂದು ನೀರಿಗೆ ತಳ್ಳಿದ್ದಾನೆ. ಪರಿಣಾಮ ಹಸುಗೂಸು ಸಾವನ್ನಪ್ಪಿದೆ. ಆದರೆ ಮಗ ಈರಪ್ಪ ಬಾವಿಯಲ್ಲಿ ಕಡಿಮೆ ನೀಡದ್ದ ಕಾರಣ ಬದುಕುಳಿದಿದ್ದಾನೆ ಎಂದು ತಿಳಿದು ಬಂದಿದೆ.
ಇನ್ನು ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಹಿರಿಯ ಪೊಲೀಸರು ಧಾವಿಸಿ ಮಗ ಈರಪ್ಪನನ್ನು ರಕ್ಷಿಸಿ ಆರೋಪಿ ತಂದೆ ಜೋಡಿಗೇರಿಯನ್ನು ಬಂಧಿಸಿದ್ದಾರೆ. ಕಿರುಕುಳ ಹಾಗೂ ಹತ್ಯೆ ಆರೋಪ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಮುಂದುವರಿಸಿದ್ದಾರೆ.