ಪ್ರಕರಣದ ವಿವರ:
ನಗರದ ವೈಟ್ಫೀಟ್ಡ್ನಲ್ಲಿರುವ ಹೆಚ್ಡಿಎಫ್ಸಿ ಬ್ಯಾಂಕ್ನಿಂದ ಮೂರು ಲಕ್ಷ ರೂ ಹಣವನ್ನು ಡ್ರಾ ಮಾಡಿಕೊಂಡು ತಮ್ಮ ಮನೆಗೆ ವಾಪಾಸಾಗುತ್ತಿದ್ದರು. ಈ ನಡುವೆ ನಗರದ ಹೆಚ್ಎಎಲ್ ಬಳಿ ಬರುತ್ತಿದ್ದಂತೆ ಕಾರು ಪಂಕ್ಚರ್ ಆಯಿತು. ಪರಿಣಾಮ ಚಾಲಕ ರೋಹಿತ್ ಕಾರಿನಿಂದ ಇಳಿದು ನಿಂತಿದ್ದ. ಈ ವೇಳೆ ಪ್ರವೇಶಿಸಿದ ಅಪರಿಚಿತ ವ್ಯಕ್ತಿ ತಮ್ಮ ಹಣ ಕೆಳೆಗೆ ಬಿದ್ದಿದೆ ನೋಡಿ ಸರ್ ಎಂದು ಚಾಲಕನ ಗಮನ ಬೇರೆಡೆಗೆ ಸೆಳೆದು, ಕಾರಿನಲ್ಲಿದ್ದ ಮೂರು ಲಕ್ಷ ರೂ ಹಣವನ್ನು ದೋಚಿ ಪರಾರಿಯಾಗಿದ್ದಾನೆ.