ಅಭಿಷೇಕ್, ಮನ್ಸೂರ್ ನಿಗೂಢ ಸಾವು: ವಿದ್ಯಾರ್ಥಿಗಳ ಕೊಲೆ ಶಂಕೆ

ಶುಕ್ರವಾರ, 25 ಜುಲೈ 2014 (11:33 IST)
ಕಳೆದ ವರ್ಷ ಚಿತ್ರದುರ್ಗ ಜಿಲ್ಲೆಯ ಗೋಪಾಲಸ್ವಾಮಿ ಹೊಂಡದಲ್ಲಿ ಬಿದ್ದು ಅಭಿಷೇಕ್, ಮನ್ಸೂರ್ ಅಲಿ ಸಾಬ್ ಎಂಬಿಬ್ಬ ವಿದ್ಯಾರ್ಥಿಗಳು ನೀರು ಪಾಲಾಗಿದ್ದರು. ಈ ಪ್ರಕರಣ ಇದೀಗ ಮತ್ತೆ ಜೀವಪಡೆದುಕೊಂಡಿದೆ.  ಸ್ನೇಹಿತರೇ ಕೊಲೆಗೈದಿದ್ದಾರೆಂದು ಈಗ ಪೋಷಕರು ಆರೋಪಿಸಿದ್ದಾರೆ.

ಪೊಲೀಸರು ಪೋಷಕರಿಗೆ ತಿಳಿಸದೇ ಶವಸಂಸ್ಕಾರ ಮಾಡಿದ್ದರು.ಇಬ್ಬರು ಪ್ರತಿಭಾವಂತ ರಾಂಕ್ ವಿದ್ಯಾರ್ಥಿಗಳಾಗಿದ್ದು, ಸಾಯುವಂತ ಪರಿಸ್ಥಿತಿ ಇರಲಿಲ್ಲ. ಇವರಿಬ್ಬರನ್ನು ಸ್ನೇಹಿತರೇ ಕೊಲೆ ಮಾಡಿರಬಹುದು ಎಂದು ಅಭಿಷೇಕ್ ತಂದೆ ಈಶ್ವರಪ್ಪ ಆರೋಪಿಸಿದ್ದಾರೆ.

ವಿದ್ಯಾರ್ಥಿಗಳು ಕಾಲುಜಾರಿ ಬಿದ್ದು ಸತ್ತಿರುವುದರಿಂದ ಈ ಬಗ್ಗೆ ಯಾವುದೇ ತನಿಖೆ ಮಾಡಲು ಆಗುವುದಿಲ್ಲ ಎಂದು ಪೊಲೀಸರು ಹೇಳಿದ್ದರು.  ವಿದ್ಯಾರ್ಥಿಗಳ ಶವ ಪತ್ತೆಯಾದ ಬಳಿಕ ಪೋಷಕರಿಗೆ ಯಾವುದೇ ಪೂರ್ವಮಾಹಿತಿ ನೀಡದೇ ಶವಗಳ ಅಂತ್ಯಸಂಸ್ಕಾರವನ್ನು ಪೊಲೀಸರು ಮಾಡಿದ್ದರು. 

ವೆಬ್ದುನಿಯಾವನ್ನು ಓದಿ