ಮತ್ತೊಂದೆಡೆ ಬಿಜೆಪಿ ನಾಯಕರು ಮೈತ್ರಿ ವಿರುದ್ಧ ಗುಡುಗುತ್ತಿದ್ದಾರೆ. 'ಜನರು ಕೊಟ್ಟ ತೀರ್ಪಿಗೆ ಕಾಂಗ್ರೆಸ್ ವಿರುದ್ಧವಾಗಿ ನಡೆಯುತ್ತಿದೆ' ಎಂದಿರುವ ಬಿಬಿಎಂಪಿ ಚುನಾವಣಾ ಉಸ್ತುವಾರಿ ಹೊಣೆ ಹೊತ್ತ ಆರ್. ಅಶೋಕ್, ಈ ನಡೆ 'ಇದು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಕಂಟಕವಾಗಲಿದೆ' ಎಂದು ಎಚ್ಚರಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೇ ನೀಡಿರುವ ಶಾಸಕ ವೈಎಸ್’ವಿ ದತ್ತ, ನಾನು ಈಗ ತಾನೇ ಸಿದ್ದರಾಮಯ್ಯ ಅವನ್ನು ಭೇಟಿ ಮಾಡಿ ಬಂದಿದ್ದೇನೆ, ನನ್ನ ಕ್ಷೇತ್ರ ಸಮಸ್ಯೆ ಕುರಿತು ಚರ್ಚೆ ನಡೆಸಿದ್ದೇನೆ ಹೊರತು 'ಕಾಂಗ್ರೆಸ್- ಜೆಡಿಎಸ್ ಮೈತ್ರಿಯ ವಿಚಾರವಾಗಿ ಯಾವುದೇ ಮಾತುಕತೆ ನಡೆದಿಲ್ಲ' ಎಂದಿದ್ದಾರೆ.